Saturday, April 26, 2025

Fact Check

Fact Check: ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?

Written By Vasudha Beri, Translated By Ishwarachandra B G, Edited By Pankaj Menon
Feb 26, 2024
banner_image

Claim
ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು

Fact
ಪಂಜಾಬ್ ನ ತಾರ್ನ್ ತರಣ್ ನ ಗುರುದ್ವಾರ ಆವರಣದಿಂದ ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಪೋಸ್ಟರ್ ಅನ್ನು ತೆಗೆದುಹಾಕಿದ ನಂತರ ನಡೆದ ಪ್ರತಿಭಟನೆಯ ವೀಡಿಯೋವನ್ನು ರೈತರ ಪ್ರತಿಭಟನೆಯದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.

ಪೇಟ ಧರಿಸಿದ ಪುರುಷರ ಗುಂಪು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸುತ್ತಿರುವುದನ್ನು ಮತ್ತು ಕಾರನ್ನು ಧ್ವಂಸಗೊಳಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹದಿನೈದು ಸೆಕೆಂಡುಗಳ ಈ ವೀಡಿಯೋದಲ್ಲಿ ಖಡ್ಗ ಹಿಡಿದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ದಾಳಿ ನಡೆಸುತ್ತಿರುವುದನ್ನು ಕಾಣಬಹುದು. ವೀಡಿಯೋ ಹಂಚಿಕೊಂಡ ಅನೇಕ ಬಳಕೆದಾರರು ಇದನ್ನು ಈಗ ನಡೆಯುತ್ತಿರುವ  ರೈತರ ಪ್ರತಿಭಟನೆಗೆ ಲಿಂಕ್ ಮಾಡಿದ್ದಾರೆ ಮತ್ತು “ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಖಡ್ಗ ಹಿಡಿಯಲು ಅನುಮತಿ ಇದ್ದರೂ ಅದನ್ನು ಬಳಕೆ  ಮಾಡಿದ ರೈತ ಎಂದು ಹೇಳಿಕೊಳ್ಳಲಾದ ವ್ಯಕ್ತಿಯನ್ನು ಅವರು ಪ್ರಶ್ನಿಸಿದ್ದಾರೆ.

Also Read: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?

ಆದರೆ ಈ ವೀಡಿಯೋ ರೈತರ ಪ್ರತಿಭಟನೆಗೆ ಮೊದಲೇ ನಡೆದಿದ್ದು, ಬೇರೆ ಘಟನೆಗೆ ಸಂಬಂಧಿಸಿದ್ದಾಗಿದೆ. ಇದನ್ನೀಗ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ. ಎಕ್ಸ್ ಮತ್ತು ಫೇಸ್ಬುಕ್ ತಾಣಗಳ ಹೊರತಾಗಿ, ಈ ವೀಡಿಯೋ ಯೂಟ್ಯೂಬ್ನಲ್ಲಿಯೂ ಕಾಣಿಸಿಕೊಂಡಿದೆ.

ಈ ರೀತಿಯ ಪೋಸ್ಟ್ ಗಳನ್ನು ಇಲ್ಲಿಇಲ್ಲಿಇಲ್ಲಿ, ಇಲ್ಲಿಇಲ್ಲಿ ಮತ್ತು ಇಲ್ಲಿ ಕಾಣಬಹುದು.

Fact Check/ Verification

ವೈರಲ್ ವೀಡಿಯೊದ ಕೀಫ್ರೇಮ್ ಗಳನ್ನು ತೆಗೆದು, ನಾವು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಜನವರಿ 31, 2024 ರ @_majhe_wale_bhau1984 ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಕಂಡುಬಂದಿದೆ. ಇದರಲ್ಲಿ ವೈರಲ್‌ ಆಗಿರುವ ಕ್ಲಿಪ್‌ ಕೂಡ ಇದೆ.  

Fact Check: ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?
@_majhe_wale_bhau1984 ಇನ್‌ಸ್ಟಾಗ್ರಾಂ ಪೋಸ್ಟ್ ನ ಸ್ಕ್ರೀನ್‌ ಗ್ರ್ಯಾಬ್‌

ಇನ್ನೊಬ್ಬರು ಇನ್ಸ್ಟಾಗ್ರಾಮ್ ಬಳಕೆದಾರರು ಅದೇ ದಿನ  ವೀಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಆದ್ದರಿಂದ ಈ ವೀಡಿಯೋ ಫೆಬ್ರವರಿ 13 ರಂದು ಶುರುವಾದ ರೈತರ ದೆಹಲಿ ಚಲೋ ಆರಂಭಕ್ಕೆ ಮೊದಲಿನದ್ದು ಎಂದು ತೀರ್ಮಾನಿಸಲು ಕಾರಣವಾಗಿದೆ. 

ಅನಂತರ, ಕ್ಲಿಪ್ ಹೊಂದಿರುವ ಪೋಸ್ಟ್ಗಳ ಕಾಮೆಂಟ್ ವಿಭಾಗವನ್ನು ನಾವು ನೋಡಿದ್ದೇವೆ ಮತ್ತು ಅನೇಕ ಬಳಕೆದಾರರು ಇದು ಹಳೆಯ ವೀಡಿಯೋ ಮತ್ತು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಗಮನಸೆಳೆದಿದ್ದಾರೆ. ಅಂತಹ ಒಬ್ಬ ಬಳಕೆದಾರರು ಈ ತುಣುಕು ಪಂಜಾಬ್ನ ಪಹುವಿಂಡ್ ನಿಂದ ಬಂದಿದೆ ಎಂದು ಬರೆದುಕೊಂಡಿದ್ದಾರೆ.

Also Read: ರಾಷ್ಟ್ರಧ್ವಜ ಅವಮಾನಿಸಿದ ರೈತರು ಎಂದು ಕೆನಡಾ ವೀಡಿಯೋ ವೈರಲ್

ಆ ಪ್ರಕಾರ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಜನವರಿ 29, 2024 ರ ಜಾಗರಣ್ ವರದಿ ಲಭ್ಯವಾಗಿದೆ. “ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಪೋಸ್ಟರ್ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಪಂಜಾಬ್ ನ ತಾರ್ನ್ ತರಣ್ ನಲ್ಲಿರುವ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ” ಎಂದು ಅದು ಹೇಳಿದೆ. “ತಾರ್ನ್ ತರಣ್ ನ ಪಹುವಿಂಡ್ ಗ್ರಾಮದಲ್ಲಿ ಭಿಂದ್ರನ್ ವಾಲೆ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ತೆಗೆದುಹಾಕುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ” ಎಂದು ಅವರು ಹೇಳಿದರು.

Fact Check: ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?


ಇದರೊಂದಿಗೆ ನಾವು ಜಾಗರಣ್‌ ವರದಿಯಲ್ಲಿರುವ ಫೋಟೋವನ್ನು ಮತ್ತು ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ಗಮನಿಸಿದ್ದೇವೆ. ಇವುಗಳಿಗೂ ಸಾಮ್ಯತೆ ಇರುವುದನ್ನು ಗುರುತಿಸಿದ್ದೇವೆ.

ವೈರಲ್‌ ವೀಡಿಯೋ ಮತ್ತು ಜಾಗರಣ್‌ ವರದಿಯ ಫೊಟೋ (ಎಡದಿಂದ ಬಲಕ್ಕೆ)

ವರದಿಗಳ ಪ್ರಕಾರ, ಭಿಂದ್ರನ್ ವಾಲೆ ಅವರ ಪೋಸ್ಟರ್ ಅನ್ನು ತೆಗೆದುಹಾಕುವ ವೀಡಿಯೋ ವೈರಲ್ ಆದ ನಂತರ, ಅನೇಕ ಸಿಖ್ ಮುಖಂಡರು ಗುರುದ್ವಾರವನ್ನು ತಲುಪಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅವರು ಗುರುದ್ವಾರ ಸಮಿತಿ ಅಧ್ಯಕ್ಷ ಕರ್ನಲ್ ಹರ್ಸಿಮ್ರನ್ ಸಿಂಗ್ (ನಿವೃತ್ತ) ಅವರ ಕಾರನ್ನು ಧ್ವಂಸಗೊಳಿಸಿದರು. ಈ ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ತಾರ್ನ್ ತರಣ್ ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಪ್ರೀತ್ ಇಂದರ್ ಸಿಂಗ್ ಹೇಳಿದ್ದಾರೆ.

ಇದಲ್ಲದೆ, ಗೂಗಲ್ನಲ್ಲಿ ” “Bhindranwale poster” ಮತ್ತು ” Tarn Taran clash” ಬಗ್ಗೆ ಕೀವರ್ಡ್ ಹುಡುಕಾಟದಲ್ಲಿ ನ್ಯೂಸ್ 18 ಪಂಜಾಬ್ / ಹರಿಯಾಣ / ಹಿಮಾಚಲದ ಜನವರಿ 29, 2024 ರ ಘಟನೆಯ ವೀಡಿಯೋ ವರದಿ ಲಭ್ಯವಾಗಿದೆ.

 ನ್ಯೂಸ್ 18 ಪಂಜಾಬ್ / ಹರಿಯಾಣ / ಹಿಮಾಚಲ ವರದಿಯಲ್ಲಿ ಕಾಣಿಸಿಕೊಂಡಿರುವ ವೀಡಿಯೋ ಮತ್ತು ವೈರಲ್ ವೀಡಿಯೋದ ಕೀಫ್ರೇಮ್ಗಳನ್ನು ಹೋಲಿಸಿದಾಗ, ಎರಡೂ ಒಂದೇ ಘಟನೆಯದ್ದು ಎಂದು ನಾವು ತೀರ್ಮಾನಿಸಬಹುದು.

ವೈರಲ್‌ ವೀಡಿಯೋ ಮತ್ತು ನ್ಯೂಸ್‌ 18 ಪಂಜಾಬ್‌/ ಹರಿಯಾಣಾ/ ಹಿಮಾಚಲ ವರದಿ (ಎಡದಿಂದ ಬಲಕ್ಕೆ)

 Conclusion

ಪಂಜಾಬ್ ನ ತಾರ್ನ್ ತರಣ್ ನ ಗುರುದ್ವಾರ ಆವರಣದಿಂದ ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಪೋಸ್ಟರ್ ಅನ್ನು ತೆಗೆದುಹಾಕಿದ ನಂತರ ನಡೆದ ಪ್ರತಿಭಟನೆಯ ವೀಡಿಯೋವನ್ನು ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Also Read: ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್‌ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎನ್ನುವುದು ನಿಜವೇ?

Result: False

Our Sources:
Instagram post by @_majhe_wale_bhau1984, Dated: January 31, 2024
Report By Jagran, Dated: January 29, 2024
YouTube Video By News18 Punjab/Haryana/Himachal, Dated: January 29, 2024.

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,944

Fact checks done

FOLLOW US
imageimageimageimageimageimageimage