Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್

ಬಾಂಗ್ಲಾ ಹಿಂದೂ ಮಹಿಳೆಯರ ಸ್ಥಿತಿ, ಬಾಂಗ್ಲಾ ಪ್ರತಿಭಟನೆ

Authors

Vasudha noticed the growing problem of mis/disinformation online after studying New Media at ACJ in Chennai and became interested in separating facts from fiction. She is interested in learning how global issues affect individuals on a micro level. Before joining Newschecker’s English team, she was working with Latestly.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ

Fact
ಢಾಕಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರ ಆತ್ಮಹತ್ಯೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯ ಬೀದಿ ನಾಟಕದ ವೀಡಿಯೋ ಇದಾಗಿದೆ.

ಶೇಖ್ ಹಸೀನಾ ಅವರ ನಿರ್ಗಮನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ಉದ್ದೇಶಿತ ದಾಳಿಗಳ ವರದಿಗಳ ಮಧ್ಯೆ, ಆ ಸಮುದಾಯದ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ ಎಂದು ಹೇಳಿಕೊಳ್ಳುವ ವೀಡಿಯೋಗಳು ಸಮುದಾಯದ ಸದಸ್ಯರ ವಿರುದ್ಧ ಕ್ರೌರ್ಯವನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಹಲವಾರು ಪರಿಶೀಲಿಸದ ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತುಂಬಿ ತುಳುಕುತ್ತಿವೆ. ಬಿಕ್ಕಟ್ಟಿನಿಂದ ಬಳಲುತ್ತಿರುವ ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ದುಃಸ್ಥಿತಿಯನ್ನು ತೋರಿಸಲು ಹುಡುಗಿಯೊಬ್ಬಳು ತನ್ನ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿ ಮುಚ್ಚಿರುವುದನ್ನು ತೋರಿಸುವ ಅಂತಹ ಒಂದು ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್

ಆದಾಗ್ಯೂ, ಢಾಕಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಆತ್ಮಹತ್ಯೆಯ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಈ ವೀಡಿಯೋ ಇದೆ ಎಂದು ನ್ಯೂಸ್‌ ಚೆಕರ್ ಕಂಡುಕೊಂಡಿದೆ. ಹಲವಾರು ಎಕ್ಸ್ ಬಳಕೆದಾರರು ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ತೋರಿಸುತ್ತದೆ ಎಂದು ಆರೋಪಿಸಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸುಮಾರು 30 ಸೆಕೆಂಡುಗಳ ಈ ವೀಡಿಯೋ ಯೂಟ್ಯೂಬ್ ನಲ್ಲಿಯೂ ಕಾಣಿಸಿಕೊಂಡಿದೆ.

Fact Check/Verification

ವೈರಲ್ ವೀಡಿಯೋವನ್ನು ನಾವು ಪರಿಶೀಲಿಸಿದಾಗ, ಅದರ ಹಿಂಭಾಗದಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದಿರುವ ಬಸ್‌ ಅನ್ನು ನಾವು ನೋಡಿದ್ದೇವೆ. ಇದರ ಬಗ್ಗೆ ಗೂಗಲ್ ಲೆನ್ಸ್ ಮೂಲಕ ಹುಡುಕಲಾಗಿದ್ದು, ಅದು ಜಗನ್ನಾಥ ವಿಶ್ವವಿದ್ಯಾಲಯ ಎಂದು ಅನುವಾದಿಸಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್

ಇದಲ್ಲದೆ, ಅನೇಕ ಎಕ್ಸ್ ಬಳಕೆದಾರರು ಈ ವೀಡಿಯೋ ವಾಸ್ತವವಾಗಿ ಜಗನ್ನಾಥ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಆತ್ಮಹತ್ಯೆಯ ವಿರುದ್ಧದ ಪ್ರತಿಭಟನೆಯದ್ದಾಗಿದೆ ಎಂದು ಹೇಳಿರುವುದನ್ನು ನಾವು ಗಮನಿಸಿದ್ದೇವೆ.

ಅದರಂತೆ ನಾವು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದು, ಇದು ಮಾರ್ಚ್ 17, 2024 ರ ಪ್ರೊಥೋಮ್ ಅಲೋ ಅವರ ವರದಿಯನ್ನು ಒದಗಿಸಿದೆ. “ಜಗನ್ನಾಥ ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೈರುಜ್ ಸದಾಫ್ ಅವಂತಿಕಾ ಅವರ ಆತ್ಮಹತ್ಯೆಯನ್ನು ವಿರೋಧಿಸಿ ಜಗನ್ನಾಥ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾನುವಾರವೂ ವಿವಿಧ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಿದರು. ಇಂದು ಸಂಜೆಯಿಂದ, ಅವರು ಪ್ರತಿಭಟನ ರಾಲಿ, ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಪಂಜಿನ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು (ಗೂಗಲ್ ಮೂಲಕ ಬಂಗಾಳಿಯಿಂದ ಅನುವಾದಿಸಲಾಗಿದೆ)” ಎಂದು ವರದಿ ತಿಳಿಸಿದೆ.

ವರದಿಯು ಪ್ರತಿಭಟನೆಯ ದೃಶ್ಯಗಳನ್ನು ಒಳಗೊಂಡಿದೆ. ಅಂತಹ ಒಂದು ಚಿತ್ರದಲ್ಲಿ, ವೈರಲ್ ತುಣುಕಿನಲ್ಲಿ ಕಂಡುಬರುವ ಹುಡುಗಿಯನ್ನು ನಾವು ಗುರುತಿಸಿದ್ದೇವೆ. “ವಿಶ್ವವಿದ್ಯಾಲಯದ ರಂಗಭೂಮಿ ವಿಭಾಗದ ವಿದ್ಯಾರ್ಥಿಗಳು ಅವಂತಿಕಾ ಆತ್ಮಹತ್ಯೆ ಘಟನೆಯ ಬಗ್ಗೆ ಕಲೆಗಳ ಮೂಲಕ ಪ್ರದರ್ಶಿಸಿದರು” ಎಂದು ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್
ಪ್ರೊಥೊಮ್ ಆಲೂ ವೆಬ್‌ ಸೈಟ್ ವರದಿ

ಅನೇಕ ವರದಿಗಳಲ್ಲಿ, ವಿದ್ಯಾರ್ಥಿಯ ಆತ್ಮಹತ್ಯೆಯ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಅದೇ ಹುಡುಗಿ ಕೃತ್ಯ ಎಸಗುತ್ತಿರುವುದನ್ನು ತೋರಿಸುವ ದೃಶ್ಯಗಳನ್ನು ಪ್ರಸಾರ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್
(ಎಡದಿಂದ ಬಲಕ್ಕೆ) ಸಂಗ್ ಬಾದ್‌ ವೆಬ್‌ ಸೈಟ್ ಮತ್ತು ಇತ್ತೇಫಾಕ್ ಪೋಸ್ಟ್ ಸ್ಕ್ರೀನ್‌ ಗ್ರ್ಯಾಬ್

ಚಾನೆಲ್ 24 ರ ವೀಡಿಯೋ ವರದಿಯಲ್ಲಿ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡ ಹುಡುಗಿ ಮತ್ತು ಇತರರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿರುವುದನ್ನು ನಾವು ಗಮನಿಸಿದ್ದೇವೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್
ಚಾನೆಲ್‌ 24 ವೀಡಿಯೋ


ಹೆಚ್ಚಿನ ಸಂಶೋಧನೆಯ ನಂತರ, ಜುಲೈ 31, 2024 ರ ಬಾಂಗ್ಲಾದೇಶದ ಪ್ರಕಟಣೆ ದಿ ನ್ಯೂಸ್  ವರದಿಯನ್ನು ನಾವು ಕಂಡುಕೊಂಡಿದ್ದೇವೆ, ಆ ವೀಡಿಯೋದಲ್ಲಿ ಕಂಡುಬರುವ ವಿದ್ಯಾರ್ಥಿಯನ್ನು ‘ತ್ರಿಷ್ಣಾ’ ಎಂದು ಗುರುತಿಸಿದೆ. ಈ ಹಿಂದೆ ಹೇಳಿದಂತೆ ಅವರು ಅವಾಮಿ ಲೀಗ್ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ್ ಛತ್ರ ಲೀಗ್ (ಬಿಸಿಎಲ್) ನ ನಾಯಕಿಯಲ್ಲ ಎಂದು ವರದಿ ಸ್ಪಷ್ಟಪಡಿಸಿದೆ ಮತ್ತು “ಇದು ಅವಂತಿಕಾ ಅಪು ಅವರ ಸಾವಿಗೆ ಮೇಣದಬತ್ತಿ ಬೆಳಕಿನ ಜಾಗರಣೆಯ ದಿನದಂದು ಬೀದಿ ನಾಟಕದ ದೃಶ್ಯವಾಗಿದೆ. ಈ ಘಟನೆಯ ನಂತರ, ನನ್ನ ಸಂಬಂಧಿಕರು ಮತ್ತು ಪರಿಚಿತರು ನನಗೆ ಕರೆ ಮಾಡಿ ಘಟನೆಯ ವಿವರಗಳನ್ನು ಕೇಳಿದರು. ಇದು ಚಿತ್ರಹಿಂಸೆಯ ಪ್ರಕರಣ ಎಂದು ಅವರು ಭಾವಿಸಿದರು.” ಎಂದಿದೆ.

2024ರ ಜನವರಿ 26ರಂದು ಜೆಎನ್ ಯು ಶಾರ್ಟ್ ಸ್ಟೋರೀಸ್ ನ ಫೇಸ್ಬುಕ್ ಪೋಸ್ಟ್ ಕೂಡ ಇದೇ ವೀಡಿಯೋವನ್ನು ಹೊಂದಿತ್ತು. ಬಾಲಕಿ 2021-22ರ ಶೈಕ್ಷಣಿಕ ವರ್ಷದಲ್ಲಿ ಜಗನ್ನಾಥ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಾಳೆ. ಈ ವೀಡಿಯೋ ಕೆಲವು ದಿನಗಳ ಹಿಂದೆ ಅವಂತಿಕಾ ಅವರ ಆತ್ಮಹತ್ಯೆಯ ವಿರುದ್ಧದ ಪ್ರತಿಭಟನೆಯಾಗಿ ಬೀದಿ ನಾಟಕದ ದೃಶ್ಯವಾಗಿದೆ! ” ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್
ಜೆಎನ್‌ಯು ಶಾರ್ಟ್ ಸ್ಟೋರೀಸ್‌ ಪೋಸ್ಟ್


ನ್ಯೂಸ್ಚೆಕರ್ ವೀಡಿಯೋದಲ್ಲಿ ಕಂಡುಬರುವ ಹುಡುಗಿಯ ಸ್ನೇಹಿತನನ್ನು ಕೂಡ ಸಂಪರ್ಕಿಸಿದೆ. ಅವರು ಪ್ರತಿಕ್ರಿಯಿಸಿ, ಆ ಹುಡುಗಿ ಹಿಂದೂ ಆಗಿದ್ದರು. ಆದರೆ ಸಹಪಾಠಿಗಳ ಬೆಂಬಲ ರಹಿತ ನಡವಳಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆ ಹುಡುಗಿಯ ಕುರಿತಾದ ಬೀದಿ ನಾಟಕ ಅದಾಗಿತ್ತು” ಎಂದವರು ತಿಳಿಸಿದ್ದಾರೆ.

Conclusion

ಆದ್ದರಿಂದ, ಬಾಂಗ್ಲಾದೇಶದ ಹಿಂದೂ ಮಹಿಳೆಯರ ಪ್ರಸ್ತುತ ದುಃಸ್ಥಿತಿಯನ್ನು ತೋರಿಸಲು ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಆತ್ಮಹತ್ಯೆಯ ಪ್ರತಿಭಟನೆಯ ಭಾಗವಾದ ನಾಟಕದ ದೃಶ್ಯವೊಂದನ್ನು ದಾರಿತಪ್ಪಿಸುವಂತೆ ಹಂಚಿಕೊಳ್ಳಲಾಗಿದೆ.

Result: Missing Context

Our Sources
Report By Prothom Alo, Dated: March 17, 2024

YouTube Video By Channel 24, Dated: March 18, 2024

Report By The News, Dated: July 31, 2024

(With reporting inputs from Runjay Kumar)

(ಈ ಲೇಖನವನ್ನು ಮೊದಲು ನ್ಯೂಸ್‌ ಚೆಕರ್‌ ಇಂಗ್ಲಿಷ್‌ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Vasudha noticed the growing problem of mis/disinformation online after studying New Media at ACJ in Chennai and became interested in separating facts from fiction. She is interested in learning how global issues affect individuals on a micro level. Before joining Newschecker’s English team, she was working with Latestly.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.