Fact Check: ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆಯೇ?

ಯೋಗಿ ಆದಿತ್ಯನಾಥ್, ಚಪ್ಪಲಿ, ದಿನೇಶ್‌ ಗುಂಡೂರಾವ್‌, ಉನ್ನಾವ್‌ ಅತ್ಯಾಚಾರ, ಪ್ರತಿಭಟನೆ, ಕಾಂಗ್ರೆಸ್‌

Claim
ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್‌ ಗುಂಡೂರಾವ್ ಹೇಳಿದ್ದಾರೆ

Fact
2018ರ ಸಂದರ್ಭ ಉನ್ನಾವ್‌ ಅತ್ಯಾಚಾರ ಪ್ರಕರಣ ವಿರುದ್ಧದ ಪ್ರತಿಭಟನೆಯಲ್ಲಿ ದಿನೇಶ್‌ ಗುಂಡೂರಾವ್‌ ಅವರು ಈ ಹೇಳಿಕೆ ನೀಡಿದ್ದಾರೆ

ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ ಎಂಬ ಮೆಸೇಜ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. 

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಹತ್ತಿರುವಾಗುತ್ತಿದ್ದಂತೆ ಚುನಾವಣಾ ಪ್ರಚಾರದಲ್ಲಿ ವಿವಿಧ ನಾಯಕರ ವಾಗ್ದಾಳಿಗಳು ಕೇಳಿಬರುತ್ತಿದ್ದು, ಅದರಲ್ಲಿ ಇದೊಂದು ಹೇಳಿಕೆಯೂ ಓಡಾಡುತ್ತಿದೆ.

ಟ್ವಿಟರ್‌ನಲ್ಲಿ ಈ ಕುರಿತ ಕ್ಲೇಮ್‌ ಕಂಡುಬಂದಿದ್ದು, “ಯೋಗಿ ಆದಿತ್ಯನಾಥ್ ಒಬ್ಬ ಢೋಂಗಿ ಭೋಗಿ ನಾಥ್‌ ಆಗಿದ್ದುಅವನು ಸಿಎಂ ಸ್ಥಾನದಲ್ಲಿ ಮುಂದುವರೆಯುವುದಕ್ಕೆ ನಾಲಾಯಕ್‌ ಆಗಿದ್ದಾನೆ. ಅವನು ಕರ್ನಾಟಕಕ್ಕೆ ಬರುವುದರಿಂದ ನಾಡಿಗೆ ಅಪಮಾನವಾಗಲಿದ್ದು ಅವನು ಮತ್ತೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ” ಎಂದು ಹೇಳಲಾಗಿದೆ. ಈ ಕ್ಲೇಮ್‌ನಲ್ಲಿ “ಒಬ್ಬ ಸನ್ಯಾಸಿ ಬಗ್ಗೆಇಷ್ಟು ತುಚ್ಛ ಹೇಳಿಕೆ ಕೊಟ್ಟಿರುವ ಈ ಅಧಮನಿಗೆ ಮೇ 13ರ ನಂತರ ಅವ ಹೇಳಿದ ಹಾಗೆ ಅವನಿಗೆ ಔತಣ ಮಾಡತಕ್ಕದ್ದು” ಎಂದು ಹೇಳಲಾಗಿದೆ. ಈ ಕ್ಲೇಮ್‌ ಅನ್ನು ಇಲ್ಲಿ ನೋಡಬಹುದು

ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆಯೇ?

ಈ ಕ್ಲೇಮಿನ ಸತ್ಯಶೋಧನೆಯನ್ನು ಮಾಡಲಾಗಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ. 

Fact Check/Verification

ಸತ್ಯಶೋಧನೆಗಾಗಿ ಮೊದಲು ಗೂಗಲ್‌ ಕೀವರ್ಡ್ ಸರ್ಚ್ ನಡೆಸಲಾಗಿದೆ. ಈ ವೇಳೆ ಕೆಲವು ಫಲಿತಾಂಶಗಳು ಲಭ್ಯವಾಗಿವೆ. 

ಎಪ್ರಿಲ್‌ 14, 2018ರ ನ್ಯೂಸ್‌ 18 ಕನ್ನಡ ವರದಿ ಪ್ರಕಾರ, “ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಅವರು ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಿನೇಶ್ ಗುಂಡೂರಾವ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಶಾಸಕನೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೂ ಕೂಡ ಯೋಗಿ ಆದಿತ್ಯನಾಥ್ ಕ್ರಮ ಜರುಗಿಸಿಲ್ಲ. ಹೀಗಾಗಿ, ಯೋಗಿ ಆದಿತ್ಯ ನಾಥ್ ಒಬ್ಬ ಢೋಂಗಿ ಭೋಗಿ ನಾಥ್ ಆಗಿದ್ದು, ಅವನು ಸಿಎಂ ಸ್ಥಾನದಲ್ಲಿ ಮುಂದುವರೆಯುದುದಕ್ಕೆ ನಾಲಾಯಕ್ ಆಗಿದ್ದಾನೆ. ಅವನನ್ನು ಕೂಡಲೇ ಪ್ರಧಾನಿ ನರೇಂದ್ರ ಮೋದಿ ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಯೋಗಿ ಆದಿತ್ಯಾನಾಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಅವನು ಕರ್ನಾಟಕಕ್ಕೆ ಬರುವುದರಿಂದ ನಾಡಿಗೆ ಅಪಮಾನವಾಗಲಿದ್ದು, ಅವನು ಮತ್ತೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.” ಎಂದಿದೆ. 

ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆಯೇ?
ನ್ಯೂಸ್‌ 18 ಕನ್ನಡ ವರದಿ

ಎಪ್ರಿಲ್‌ 15 2018ರಂದು ಡೆಕ್ಕನ್‌ ಹೆರಾಲ್ಡ್ ವರದಿ ಮಾಡಿದ ಪ್ರಕಾರ “ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ವಿವಾದಿತ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಕಥುವಾ, ಉನ್ನಾವ್ ಅತ್ಯಾಚಾರ ಪ್ರಕರಣಗಳ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ” ಎಂದು ವರದಿಯಲ್ಲಿದೆ. 

Also Read: ಪಾಕಿಸ್ಥಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರ ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದ್ದಾರೆ ಎನ್ನುವುದು ಸತ್ಯವೇ?

ಎಪ್ರಿಲ್‌ 15, 2018ರಂದು ಫಸ್ಟ್‌ ಪೋಸ್ಟ್ ವರದಿ ಮಾಡಿದ ಪ್ರಕಾರ “ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ರಾಜೀನಾಮೆಗೆ ಆಗ್ರಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಯೋಗಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಲಾಗಿದೆ” ಎಂದು ಹೇಳಿದೆ. ಉನ್ನಾವ್, ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ, ಬೆಂಗಳೂರಿನಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ” ಎಂದಿದೆ. 

ಎಪ್ರಿಲ್‌ 15, 2018ರ ದಿ ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ ಪ್ರಕಾರ “ ದಿನೇಶ್‌ ಗುಂಡೂರಾವ್‌ ಅವರು ಯೋಗಿ ಆದಿತ್ಯನಾಥ್‌ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ಆ ನಂತರ ಅವರು ವಿಷಾದ ವ್ಯಕ್ತಪಡಿಸಿದ್ದು, ಭಾವಾತಿರೇಕಕ್ಕೆ ಒಳಗಾಗಿ ತಾನು ಹೀಗೆ ಹೇಳಿಕೆ ನೀಡಿದ್ದಾಗಿ ಹೇಳಿದ್ದಾರೆ. ಉನ್ನಾವ್ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಹೀಗೆ ಹೇಳಿಕೆ ನೀಡಿದ್ದರು” ಎಂದಿದೆ. 

ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆಯೇ?
ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ

Conclusion

ಈ ಸತ್ಯಶೋಧನೆಯ ಪ್ರಕಾರ, ದಿನೇಶ್‌ ಗುಂಡೂರಾವ್‌ ಅವರು ಯೋಗಿ ಆದಿತ್ಯನಾಥ್‌ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಈಗ ಹೇಳಿಲ್ಲ. ಇದು 2018ರ ಸಂದರ್ಭದ್ದಾಗಿದೆ. 

Result: Missing Context

Our Sources

Report by News 18 Kannada, Dated: April 14, 2018

Report by Deccan Herald, Dated: April 15, 2018

Report by Fistpost, Dated: April 15, 2018

Report by The Indian Express, Dated: April 15, 2018


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.