Fact Check: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?

ಅಲ್ವಾರ್, ಹಿಂದೂ, ಮುಸ್ಲಿಂ ಗಲಾಟೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು

Fact
ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದಿರುವುದು ಸುಳ್ಳು. ಈ ವಿವಾದ ಒಂದ ಕುಟುಂಬದ ನಡುವಿನದ್ದಾಗಿದೆ ಎಂದು ತಿಳಿದುಬಂದಿದೆ

ಅಲ್ವಾರ್ ನಲ್ಲಿ ಹಿಂದೂಗಳ ಮನೆಗೆ ನುಗ್ಗಿ ಮುಸ್ಲಿಮರು ಹೊಡೆದರು ಎಂದು ಹಲ್ಲೆಯೊಂದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಈ ವೀಡಿಯೋ ಸಂದೇಶದಲ್ಲಿ, “ಈ ವೀಡಿಯೋವನ್ನು ಆದಷ್ಟು ಬೇಗ ಎಲ್ಲಾ ಗ್ರೂಪ್‌ಗಳಲ್ಲಿ ಪೋಸ್ಟ್ ಮಾಡಿ ರಾಜಸ್ಥಾನ ಬಿಜೆಪಿ ಸರ್ಕಾರ ಬುಲ್ಜಡೋಜರ್ ಅನ್ನು ಇಂದೇ ತಿರುಗಿಸಬೇಕು. ಅಲ್ವಾರ್‌ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು” ಎಂದಿದೆ.

Also Read: ಅಯೋಧ್ಯೆ ರಾಮ ಮಂದಿರದಲ್ಲಿ ಕಾಣಿಕೆ ಹುಂಡಿ ಭರ್ತಿಯಾಗಿದೆ ಎನ್ನುವ ಈ ವೀಡಿಯೋದ ಅಸಲಿಯತ್ತೇನು?

Fact Check: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?
ವಾಟ್ಸಾಪ್‌ನಲ್ಲಿ ಕಂಡುಬಂದ ಕ್ಲೇಮ್

ಇದೇ ರೀತಿಯ ಕ್ಲೇಮ್‌ ಅನ್ನು ನಾವು ಯೂಟ್ಯೂಬ್‌ನ ಟ್ರಾವೆಲ್‌ ಬ್ಲಾಗ್ಸ್ ಚಾನೆಲ್‌ ನಲ್ಲೂ ಕಂಡುಕೊಂಡಿದ್ದೇವೆ.

ಆದಾಗ್ಯೂ, ವೈರಲ್ ಹಕ್ಕು ನಕಲಿ ಎಂದು ನಮ್ಮ ತನಿಖೆಯಲ್ಲಿ ನಾವು ಕಂಡುಕೊಂಡಿದ್ದೇವೆ. ಜನವರಿ 18 ರಂದು ರಾಜಸ್ಥಾನದ ಅಲ್ವಾರ್ ನಲ್ಲಿ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದ್ದು, ಯಾವುದೇ ಮುಸ್ಲಿಂ ಸಮುದಾಯದ ವ್ಯಕ್ತಿ ಇರಲಿಲ್ಲ ಎಂದು ಗೊತ್ತಾಗಿದೆ.

Fact Check/ Verification

ವೈರಲ್ ವೀಡಿಯೋವನ್ನು ತನಿಖೆ ಮಾಡಲು ನ್ಯೂಸ್ಚೆಕರ್ ಮೊದಲು ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ.

ಈ ವೇಳೆ ಜನವರಿ 28, 2024ರ ಬಾತ್ ಆಜ್‌ ಕಿ ಯೂಟ್ಯೂಬ್‌ ಚಾನೆಲ್‌ನ ವೀಡಿಯೋವೊಂದು ಲಭ್ಯವಾಗಿದೆ. ಇದರಲ್ಲಿ ನೀಡಿದ ಶೀರ್ಷಿಕೆಯಲ್ಲಿ “ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ಮಧ್ಯೆ ಲಾಠಿ ಪ್ರಹಾರ” ಎಂದು ಹೇಳಲಾಗಿದೆ. ಇದನ್ನು ಗಮನಿಸಿ ನಾವು ಇನ್ನಷ್ಟು ಶೋಧವನ್ನು ನಡೆಸಿದ್ದೇವೆ.

19 ಜನವರಿ 2024 ರಂದು ದೈನಿಕ್ ಭಾಸ್ಕರ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ ವೈರಲ್ ವಿಡಿಯೋ ಕೂಡ ಇದೆ.ವರದಿಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಜನವರಿ 18 ರಂದು ಥಾನಗಾಜಿ ಪೊಲೀಸ್ ಠಾಣೆ ಪ್ರದೇಶದ ಬಿಹಾರಿಸರ್ ರಸ್ತೆಯ ದುಹಾರ್ ಚೌಗಾನ್ನಲ್ಲಿ ಪ್ರಕರಣ ನಡೆದಿದೆ. ಹಳೆಯ ಮನೆಯ ಮಾಲೀಕತ್ವದ ಬಗ್ಗೆ ರೋಹಿತಾಶ್ ಅವರ ಕುಟುಂಬ ಸದಸ್ಯರು ಮತ್ತು ಅವರ ಪರಿಚಯಸ್ಥ ಬಾದಾಮಿ ದೇವಿ ನಡುವೆ ಜಗಳವಾಗಿತ್ತು. ಜಗಳದ ಸಮಯದಲ್ಲಿ, ಬಾದಾಮಿ ದೇವಿ ಕಡೆಯ ಜನರು ರೋಹಿತಾಶ್ ಅವರ ಕುಟುಂಬ ಸದಸ್ಯರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ.

Fact Check: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?
ದೈನಿಕ್‌ ಭಾಸ್ಕರ್‌ ವರದಿ

ದಾಳಿಯ ಸಮಯದಲ್ಲಿ, ಇನ್ನೊಂದು ಬದಿಯ ಯುವಕರು 70 ವರ್ಷದ ರಾಮ್ ಸ್ವರೂಪ್ ಅವರ ಮೇಲೂ ಕೋಲುಗಳಿಂದ ಹಲ್ಲೆ ನಡೆಸಿದರು. ಈ ದಾಳಿಯಲ್ಲಿ ರೋಹಿತಾಶ್, ಕೃಪಾ ದೇವಿ, ಮಿಸ್ರಿ ದೇವಿ, ಬಿರ್ಮಾ ಶರ್ಮಾ, ಟೇಕ್ಚಂದ್ ಸೇರಿದಂತೆ 8 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಐವರನ್ನು ಜೈಪುರಕ್ಕೆ ಕಳುಹಿಸಲಾಗಿದೆ. ಪೊಲೀಸ್ ಅಧಿಕಾರಿ ರಾಜೇಶ್ ಮೀನಾ ಅವರ ಹೇಳಿಕೆಯೂ ವರದಿಯಲ್ಲಿದೆ. ಮನೆಯ ಮಾಲೀಕತ್ವದ ಬಗ್ಗೆ ಎರಡು ಕುಟುಂಬಗಳ ನಡುವಿನ ವಿವಾದ, ಇದರಲ್ಲಿ ಏಳು ಜನರನ್ನು ಬಂಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ ಎಂದಿದೆ.

ತನಿಖೆಯ ಸಮಯದಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಯು ಜನವರಿ 19, 2024ರಂದು ಹಿಂದೂಸ್ತಾನ್ ವೆಬ್ಸೈಟ್ನಲ್ಲಿಯೂ ಕಂಡುಬಂದಿದೆ. ಥಾನಗಾಜಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಎರಡು ಕುಟುಂಬಗಳ ನಡುವಿನ ಮನೆ ವಿವಾದದಲ್ಲಿ ಸುಮಾರು ಒಂದು ಡಜನ್ ಜನರು ಗಾಯಗೊಂಡಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಅವರಲ್ಲಿ ಐವರು ಗಂಭೀರ ಗಾಯಗೊಂಡಿದ್ದು, ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.

Fact Check: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?
ಹಿಂದೂಸ್ತಾನ್‌ ವರದಿ

ಇದರೊಂದಿಗೆ ನಾವು ಅಲ್ವಾರ್ ಪೊಲೀಸರ ಎಕ್ಸ್ ಖಾತೆಯನ್ನು ನೋಡಿದ್ದೇವೆ. ಜನವರಿ 27, 2024 ರಂದು ಬಳಕೆದಾರರೊಬ್ಬರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಲ್ವಾರ್ ಪೊಲೀಸರು, “ಈ ವೀಡಿಯೋ ಹಳೆಯದು ಮತ್ತು ಎರಡೂ ಕಡೆಯವರು ಒಂದೇ ಕುಟುಂಬಕ್ಕೆ ಸೇರಿದ್ದು ಹಿಂದೂ ಸಮುದಾಯದವರು. ಸೆಕ್ಷನ್ 151 ಸಿಆರ್ ಪಿಸಿ ಅಡಿಯಲ್ಲಿ ಎರಡೂ ಕಡೆಯ 7 ಜನರನ್ನು ಬಂಧಿಸಲಾಗಿದೆ. ಈ ಸಂಬಂಧ ಎರಡೂ ಪಕ್ಷಗಳು ಪ್ರಕರಣಗಳನ್ನು ದಾಖಲಿಸಿವೆ ಎಂದು ಹೇಳಿದೆ.


ನಮ್ಮ ತನಿಖೆ ಭಾಗವಾಗಿ ನಾವು ಥಾನಗಾಜಿ ಪೊಲೀಸ್ ಠಾಣೆಯ ಸಬ್‌ ಇನ್ಸ್ ಪೆಕ್ಟರ್ ರಾಜೇಶ್ ಮೀನಾ ಅವರನ್ನು ಸಂಪರ್ಕಿಸಿದ್ದೇವೆ. “ವೈರಲ್ ಹೇಳಿಕೆಯನ್ನು ನಿರಾಕರಿಸಿದ ಅವರು, “ಇದರಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿ ಭಾಗಿಯಾಗಿಲ್ಲ. ವಾಸ್ತವವಾಗಿ, ಇದು ಎರಡು ಕುಟುಂಬಗಳ ನಡುವಿನ ಗಲಾಟೆಯಾಗಿದ್ದು, ಬಾದಾಮಿ ದೇವಿಯ ಕಡೆಯ ಜನರು ತಮ್ಮ ಪರಿಚಯಸ್ಥರಾದ ರೋಹಿತಾಶ್ ಶರ್ಮಾ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೀಡಿಯೋದಲ್ಲಿ, ತುಳಸಿ ಶರ್ಮಾ, ಸತೀಶ್ ಶರ್ಮಾ, ಜಿತೇಂದ್ರ ಶರ್ಮಾ ಎಂಬ ಮೂವರು ಯುವಕರು ವೃದ್ಧರನ್ನು ಕೋಲುಗಳಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಶಾಂತಿ ಉಲ್ಲಂಘಿಸಿದ್ದಕ್ಕಾಗಿನಾವು ಏಳು ಜನರನ್ನು ಬಂಧಿಸಿದ್ದೇವೆ. ಈ ಪ್ರಕರಣದಲ್ಲಿ, ಎರಡೂ ಕಡೆಯಿಂದ ದೂರು ದಾಖಲಾಗಿದೆ” ಎಂದಿದ್ದಾರೆ.

Conclusion

ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ವೈರಲ್ ಹಕ್ಕು ತಪ್ಪು ಮತ್ತು ಈ ವಿವಾದ ಒಂದ ಕುಟುಂಬದ ನಡುವಿನದ್ದಾಗಿದೆ ಎಂದು ತಿಳಿದುಬಂದಿದೆ. 

Also Read: ಬುರ್ಜ್ ಖಲೀಫಾ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?

Result: False

Our Sources:

Report By Dainik Bhaskar on 19th January 2024

Report By Hindustan on 19th January 2024

Tweet By Alwar Police on 27th January 2024

Telephonic Conversation with Thanagazi SHO 

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.