Fact Check: ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ “ಹೇಳಿದಂತೆ ಕೇಳಬೇಕು” ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?

ಪೊಲೀಸರಿಗೆ ತಾಕೀತು, ಕಾಂಗ್ರೆಸ್‌, ಕಾಂಗ್ರೆಸ್‌ ಶಾಸಕ

Claim
ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ “ಹೇಳಿದಂತೆ ಕೇಳಬೇಕು” ಎಂದು ಕಾಂಗ್ರೆಸ್‌ ಮುಸ್ಲಿಂ ಶಾಸಕರು ಪೊಲೀಸರಿಗೆ ತಾಕೀತು

Fact
ಈ ವೈರಲ್‌ ವೀಡಿಯೋದಲ್ಲಿ ಶಾಸಕರು ಮಾತನಾಡುತ್ತಿರುವ ದೃಶ್ಯ ತೆಲಂಗಾಣದ್ದು ಮತ್ತು ಎಸ್‌ಐ ಯೊಬ್ಬರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ್ದು

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹೇಳಿದಂತೆ ಕೇಳಬೇಕು ಎಂಬರ್ಥದಲ್ಲಿ ಕಾಂಗ್ರೆಸ್‌ ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿದಾಡಿದೆ. ಕಾಂಗ್ರೆಸ್‌ ಶಾಸಕರು ಪೊಲೀಸರನ್ನು ತಮ್ಮ ಮನೆಗೆ ಕರೆಸಿಕೊಂಡು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ವಾಟ್ಸಾಪ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಪ್ರಕಾರ, “ನಾವು ಹೇಳಿದಂತೆ ನಡೆದುಕೊಳ್ಳಬೇಕು ಕರ್ನಾಟಕದಲ್ಲಿ ಹೊಸತಾಗಿ ಚುನಾಯಿತ ಕಾಂಗ್ರೆಸ್‌ ಮುಸ್ಲಿಂ ಶಾಸಕ ಪೊಲೀಸ್ ಅಧಿಕಾರಿಯನ್ನು ಮನೆಗೆ ಕರೆದು ಶಾಂತಿಯುತವಾಗಿ ವಿವರಿಸುತ್ತಿದ್ದಾರೆ. ನೋಡಿ ಎಲ್ಲ ಹಿಂದು ಬಾಂಧವರು ನಿಮ್ಮ ಪ್ರಿಯಭಾಗ್ಯಕ್ಕೆ ಬಹಳ ಬೇಗನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಭಾಗ್ಯ ಇನ್ನು ನಿಮಗೆ ಎಚ್ಚರಾಗದಿದ್ದರೆ ನೀವು ಬದುಕಿ ಪ್ರಯೋಜನವಿಲ್ಲ” ಎಂದು ಹೇಳಲಾಗಿದೆ.

ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ಮಾಡಿದ್ದು, ಈ ವೀಡಿಯೊ ಕರ್ನಾಟಕದ್ದಲ್ಲ, ಯಾವುದೇ ಕಾಂಗ್ರೆಸ್‌ ಶಾಸಕರಿಗೂ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ. ಇದೇ ರೀತಿಯ ಕ್ಲೇಮ್‌ ಫೇಸ್‌ಬುಕ್‌, ಟ್ವಿಟರ್‌ಗಳಲ್ಲೂ ಕಂಡುಬಂದಿದೆ.

Also Read: ಮೇ 18ರಂದು ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಎಂಬ ಆಮಂತ್ರಣ ಸುಳ್ಳು!

ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ಕಂಡುಬಂದಿದೆ. ಅಂತಹ ಟ್ವೀಟ್ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿಇಲ್ಲಿ, ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Check/ Verification

ಸತ್ಯಶೋಧನೆಗಾಗಿ ವೀಡಿಯೋವನ್ನು ಪರಿಶೀಲಿಸಿದ ವೇಳೆ ಇದರಲ್ಲಿ ಎಐಎಂಐಎಂ ಪಕ್ಷದ ಲಾಂಛನ ಬದಿಯಲ್ಲಿರುವುನ್ನು ಗುರುತಿಸಲಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ "ಹೇಳಿದಂತೆ ಕೇಳಬೇಕು" ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?
ವೈರಲ್ ವೀಡಿಯೊದಿಂದ ಸ್ಕ್ರೀನ್ ಗ್ರಾಬ್

ವೀಡಿಯೋದಲ್ಲಿ ಕಂಡುಬರುವ ನಾಂಪಲ್ಲಿ ಮತ್ತು ಜಗ್ತಿಯಾಲ್ ಪ್ರದೇಶಗಳು ತೆಲಂಗಾಣದಲ್ಲಿವೆ. ತೆಲಂಗಾಣ ರಾಜ್ಯ ಪೋರ್ಟಲ್ ಪ್ರಕಾರ, ಜಾಫರ್ ಹುಸೇನ್ ನಾಂಪಲ್ಲಿ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಎಐಎಂಐಎಂ ಶಾಸಕರಾಗಿದ್ದು, ಕಾಂಗ್ರೆಸ್ಸಿನ ಶಾಸಕರಲ್ಲ.

ಅನಂತರ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ವೈರಲ್ ವೀಡಿಯೋ ತುಣುಕುಗಳನ್ನು ಹೊಂದಿರುವ ಬಿಬಿಎನ್ ನ್ಯೂಸ್ ಇದರ ಮೇ 11, 2023 ರ ವೀಡಿಯೋ ವರದಿ ಲಭ್ಯವಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ "ಹೇಳಿದಂತೆ ಕೇಳಬೇಕು" ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?

ವರದಿ ಪ್ರಕಾರ, ಬಸ್ಸಿನಲ್ಲಿ ಸಬ್‌ ಇನ್ಸ್‌ಪೆಕ್ಟರ್‌ನಿಂದ ಕಿರುಕುಳಕ್ಕೆ ಒಳಗಾದ ಜಗ್ತಿಯಾಲ್ ನ  ಮಹಿಳೆಯೊಬ್ಬರ ಮನೆಗೆ ಎಐಎಂಐಎಂ ಶಾಸಕ ಜಾಫರ್‌ ಹುಸೇನ್‌ ಮೆರಾಜ್‌ ಮತ್ತು ಇತರ ಮುಖಂಡರು ಭೇಟಿಯಾದರು. ಈ ವರದಿ ಘಟನೆ ಬಗ್ಗೆ ಜಾಫ್‌ರ್ ಅವರ ಹೇಳಿಕೆಯನ್ನು ಕೂಡ ಒಳಗೊಂಡಿದೆ.  

Also Read: ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಭ್ರಮ, ಸತ್ಯ ಏನು?

ಈ ಘಟನೆಗೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕ ಜಗ್ತಿಯಾಲ್‌ ಗೆ ಭೇಟಿ ನೀಡಿದ ಬಗ್ಗೆ ಮೇ 11 2023 ರ ಪಿಸಿಡಬ್ಲ್ಯೂ ನ್ಯೂಸ್ ವರದಿ  ವೈರಲ್ ವೀಡಿಯೊದ ಸ್ಕ್ರೀನ್ ಗ್ರ್ಯಾಬ್‌ ಅನ್ನು ಸಹ ಒಳಗೊಂಡಿದೆ.

ಇದನ್ನೂ ಓದಿಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಬಿಜೆಪಿ ಬಾವುಟದ ಮೇಲೆ ಗೋಹತ್ಯೆ? ಇಲ್ಲ, ಹಳೆಯ ವೀಡಿಯೊವನ್ನು ಸುಳ್ಳು ಹಕ್ಕುಗಳೊಂದಿಗೆ ಹಂಚಿಕೊಳ್ಳಲಾಗಿದೆ

ಇದಲ್ಲದೆ, ಎಐಎಂಐಎಂನ ಉಪ ಮೇಯರ್ ನಿಜಾಮಾಬಾದ್ನ ಮೊಹಮ್ಮದ್ ಇದ್ರೀಸ್ ಖಾನ್ ಅವರ ಫೇಸ್ಬುಕ್ ಪೋಸ್ಟ್‌ ನಲ್ಲಿ ಪಕ್ಷದ ನಾಯಕರು ಜಗ್ತಿಯಾಲ್ ಗೆ ಭೇಟಿ ನೀಡಿದ್ದಾರೆ ಎಂದು ಹಾಕಿಕೊಂಡಿದ್ದಾರೆ. ಈ ಸಂದರ್ಭ ಅವರು ವೈರಲ್‌ ವೀಡಿಯೋದ ಸ್ಕ್ರೀನ್ ಶಾಟ್‌ ಬಳಸಿದ್ದಾರೆ

ಮೇ 10, 2023 ರ ತೆಲಂಗಾಣ ಟುಡೇ ವರದಿಯು ಈ ಘಟನೆಯನ್ನು ವಿವರಿಸುತ್ತ, “ಎಸ್ಐ ಅವರ ಪತ್ನಿ ಮತ್ತು ಇನ್ನೊಬ್ಬ ಮಹಿಳೆ ಟಿಎಸ್‌ಆರ್‌ಟಿಸಿ ಬಸ್‌ ನಲ್ಲಿ ಆಸನವನ್ನು ಹಂಚಿಕೊಳ್ಳುವ ಬಗ್ಗೆ ಪರಸ್ಪರ ವಾಗ್ವಾದಕ್ಕೆ ಇಳಿದಿದ್ದರು. ಇನ್ನೊಬ್ಬ ಮಹಿಳೆ ಸಿದ್ದಿಪೇಟೆಯಿಂದ ತನ್ನ ತಾಯಿಯೊಂದಿಗೆ ಜಗ್ತಿಯಾಲ್ ತಲುಪಲು ಬಸ್ ಹತ್ತಿದರೆ, ಎಸ್ಐ ಅವರ ಪತ್ನಿ ಕರೀಂನಗರ ಬಸ್ ನಿಲ್ದಾಣದಿಂದ ಹತ್ತಿದ್ದರು. ಸೀಟು ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಜಗ್ತಿಯಾಲ್ ತಲುಪಿದ ನಂತರ ಎಸ್ಐ ಬಸ್ ಹತ್ತಿದರು ಮತ್ತು ಮಹಿಳೆಯೊಂದಿಗೆ ವಾಗ್ವಾದಕ್ಕೆ ಇಳಿದರು. ಅವಳು ತನ್ನ ಮೊಬೈಲ್ ಫೋನ್ನಿಂದ ಎಪಿಸೋಡ್ ಅನ್ನು ರೆಕಾರ್ಡ್ ಮಾಡುತ್ತಿದ್ದಾಗ, ಎಸ್ಐ ಆಕೆಯಿಂದ ಫೋನ್ ಕಸಿದುಕೊಂಡು ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ” ಎಂದಿದೆ.

 ಘಟನೆಯಲ್ಲಿ ಆರೋಪಿಯಾಗಿರುವ ಎಸ್ಐನನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Also Read: ಭಟ್ಕಳ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆಯೇ? ಇಲ್ಲ, ಈ ಕ್ಲೇಮ್‌ ಸುಳ್ಳು

Conclusion

ಸತ್ಯಶೋಧನೆಯ ಪ್ರಕಾರ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ, ಹೊಸದಾಗಿ ಚುನಾಯಿತರಾದ ಮುಸ್ಲಿಂ ಶಾಸಕ ಪೊಲೀಸರಿಗೇ ನಿರ್ದೇಶನ ನೀಡುತ್ತಿದ್ದಾರೆ ಎನ್ನುವುದು ತಪ್ಪಾಗಿದೆ. ಈ ಘಟನೆ ತೆಲಂಗಾಣದ್ದಾಗಿದೆ.

Results: False

Our Sources
Telangana State Portal

Report By BBN News, Dated: May 11, 2023

Report By Telangana Today, Dated: May 10, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.