Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಹರಿಯಾಣದ ಪಿಂಜೋರ್ ನ ಮುಸ್ಲಿಮರ ಬಿರಿಯಾನಿ ಅಂಗಡಿಯಲ್ಲಿ ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತದೆ
Fact
ಅಂಗಡಿಯವರು ಚರಂಡಿ ನೀರನ್ನು ರಸ್ತೆ ಬದಿಗೆ ಬಿಡುತ್ತಿರುವುದು ಕಂಡುಬಂದಿದೆ ಮತ್ತು ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತಿದೆ ಎನ್ನುವುದು ಸುಳ್ಳಾಗಿದೆ
ಹರಿಯಾಣದ ಪಿಂಜೋರ್ ನ ಬಿರಿಯಾನಿ ಅಂಗಡಿಯಲ್ಲಿ ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ.
ಇದರ ಗಲಾಟೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಹಂಚಿಕೊಂಡಿದ್ದಾರೆ. ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಬಿರಿಯಾನಿ ಮಾಡಲು ಚರಂಡಿ ನೀರು ಬಳಸುತ್ತಿದ್ದವರನ್ನು ಸ್ಥಳೀಯರು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಒಳಚರಂಡಿಯಿಂದ ನೀರು ತೆಗೆದಂತೆ ತೋರಿಸುವ ಈ ವೀಡಿಯೋ, ಕೋಮು ದ್ವೇಷದ ನಿರೂಪಣೆಯೊಂದಿಗೆ ವೈರಲ್ ಆಗಿದ್ದು, ಇದು ಮುಸ್ಲಿಂ ವ್ಯಾಪಾರಿಗಳಲ್ಲಿ ಸಾಮಾನ್ಯ ಎಂಬಂತೆ ಹೇಳಲಾಗಿದೆ.
ಈ ಕುರಿತಂತೆ ಸತ್ಯಶೋಧನೆ ನಡೆಸಲು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ಗೆ (+91-9999499044) ಮನವಿ ಬಂದಿದ್ದು, ಅದನ್ನು ಸ್ವೀಕರಿಸಲಾಗಿದೆ.
ಕೆಲವು ಮಾಧ್ಯಮ ಗಳಲ್ಲೂ ಈ ವೀಡಿಯೋ ವರದಿಯಾಗಿದೆ. ಜೊತೆಗೆ ಕೋಪಗೊಂಡ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರೂ, ಅಂಗಡಿ ಮಾಲೀಕರು ಸ್ಥಳೀಯರಿಗೆ 5000 ರೂ.ಗಳನ್ನು ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಆರ್ಕೈವ್ ಮಾಡಲಾದ ಈ ಸುದ್ದಿಗಳು ಮತ್ತು ಟ್ವೀಟ್ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಬಿರಿಯಾನಿ ತಯಾರಿಕಾ ಉಪಹಾರ ಕೇಂದ್ರದಿಂದ ನೀರಿನ ಪೈಪ್ ಒಂದು ಹೊರಗೆ ಬಂದಿದ್ದು, ಇದು ಅಡುಗೆ ತಯಾರು ಮಾಡುವ ಕೋಣೆಗೆ ಹೋದ ರೀತಿ ಇರದೇ ಇರುವುದನ್ನು ನ್ಯೂಸ್ಚೆಕರ್ ಗಮನಿಸಿದೆ.
ಶಮಾ ಬಿರಿಯಾನಿ ಢಾಬಾ ಬಗ್ಗೆ ನಾವು ಫೇಸ್ಬುಕ್ನಲ್ಲಿ ಹುಡುಕಾಡಿದ್ದು ಈ ವೇಳೆ, ಕಲ್ಕಾ ಪಿಂಜೋರ್ ಲೈವ್ ಎಂಬ ಪೇಜ್ನಿಂದ ಪೋಸ್ಟ್ ಮಾಡಲಾದ ವೀಡಿಯೋ ಲಭ್ಯವಾಗಿದೆ. ಇದರಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ನಾವು ಗಮನಿಸಿದ್ದೇವೆ.
ಈ ಬಗ್ಗೆ ನಾವು ಹೆಚ್ಚಿನ ಮಾಹಿತಿಗೆ ಜಸ್ಟ್ ಡಯಲ್ ಮೂಲಕ ಶಾಮಾ ಬಿರಿಯಾನಿ ಧಾಬಾ ಎಂಬ ಉಪಾಹಾರ ಗೃಹ ಹುಡುಕಿದ್ದೇವೆ. ಅದರಲ್ಲಿದ್ದ ಸಂಪರ್ಕ ಸಂಖ್ಯೆ ಮೂಲಕ ಅಂಗಡಿಯ ಉದ್ಯೋಗಿ ಯಾಸೀನ್ ರಿಜ್ವಿ ಅವರನ್ನು ಸಂಪರ್ಕಿಸಿದೆವು, ಅವರು ಈ ವೈರಲ್ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ. ಜೊತೆಗೆ “ನಾವು ಗಟಾರದಿಂದ ಕೊಳಕು ನೀರನ್ನು ಹೊರಹಾಕಿದ್ದಾಗಿ” ಅವರು ಹೇಳಿದ್ದಾರೆ.
ಅನಂತರ ನ್ಯೂಸ್ ಚೆಕರ್ ಪಿಂಜೋರ್ ಪೊಲೀಸ್ ಠಾಣೆಯ ಎಸ್ಎಚ್ಒ ಇನ್ಸ್ಪೆಕ್ಟರ್ ಕರ್ಮವೀರ್ ಅವರನ್ನು ಸಂಪರ್ಕಸಿದೆ. ಈ ವೇಳೆ ಅವರು ವೈರಲ್ ಹೇಳಿಕೆಗಳು ಸುಳ್ಳು ಎಂದು ದೃಢಪಡಿಸಿದ್ದಾರೆ, ಗಟಾರು ನೀರನ್ನು ಬಿರಿಯಾನಿ ಬೇಯಿಸಲು ಅಥವಾ ಉಪಾಹಾರ ಗೃಹದ ಯಾವುದೇ ಶುಚಿಗೊಳಿಸುವ ಉದ್ದೇಶಗಳಿಗಾಗಿ ಬಳಸಲಾಗಿಲ್ಲ ಎಂದು ಅವರು ಪುನರುಚ್ಚರಿಸಿದರು. “ಉಪಾಹಾರ ಗೃಹವು ಹತ್ತಿರದ ಪ್ರದೇಶವನ್ನು ಕಲುಷಿತಗೊಳಿಸುತ್ತಿದೆ ಎಂದು ದೂರುದಾರರು ಹೇಳಿದ್ದಾರೆ. ನಾವು ಎರಡೂ ಕಡೆಯವರನ್ನು ಕರೆದು ಕೊಳಕು ನೀರನ್ನು ಬೀದಿಗೆ ಹರಿಸದೆ ಟ್ಯಾಂಕ್ ಗೆ ಹರಿಸುವಂತೆ ರೆಸ್ಟೋರೆಂಟ್ ಮಾಲೀಕರಿಗೆ ಸಲಹೆ ನೀಡಿದ್ದೇವೆ. (ಉಪಾಹಾರ ಗೃಹದ ಮಾಲೀಕರು) ಸಾಮಾನ್ಯವಾಗಿ ಗಟಾರು ನೀರು ಉಕ್ಕಿ ಹರಿದ ನಂತರ ಹತ್ತಿರದ ಬೀದಿಗೆ ಪಂಪ್ ಮಾಡುತ್ತಿದ್ದರು.” ಎಂದು ಹೇಳಿದ್ದಾರೆ.
ಆ ಬಳಿಕ ನಾವು ಉಪಾಹಾರ ಗೃಹದ ಮಾಲೀಕರನ್ನು ಸಹ ಸಂಪರ್ಕಿಸಲು ಯತ್ನಿಸಿದ್ದೇವೆ, ಈ ಪ್ರತಿಯನ್ನು ಪ್ರಕಟಿಸುವ ಸಮಯದಲ್ಲಿ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ನಾವು ಈ ವರದಿಯನ್ನು ಪರಿಷ್ಕರಿಸಲಿದ್ದೇವೆ.
ರಸ್ತೆಬದಿಯ ಬಿರಿಯಾನಿ ಅಂಗಡಿಯು ಅಡುಗೆಗೆ ಮತ್ತು ಪಾತ್ರೆ ಸ್ವಚ್ಛಗೊಳಿಸಲು ಚರಂಡಿ ನೀರನ್ನು ಬಳಸುತ್ತಿದೆ ಎಂಬ ಹೇಳಿಕೆ ಸುಳ್ಳು ಮತ್ತು ಕೋಮು ತಿರುಚುವಿಕೆಯೊಂದಿಗೆ ಗಲಾಟೆ ವೀಡಿಯೋ ವೈರಲ್ ಆಗಿದೆ.
Our Sources
Conversation with inspector Karamveer, Pinjore police station
Conversation with Yaseen Rizvi, Shama Biryani Dhaba
(ಈ ಲೇಖನ ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಗೊಂಡಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
December 21, 2024
Ishwarachandra B G
December 20, 2024
Ishwarachandra B G
December 14, 2024