Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿ ಬಲವಂತ
Fact
ಮಡಿಕೇರಿಯ ಶನಿವಾರ ಸಂತೆಯಲ್ಲಿ 2021ರಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಇದಾಗಿದೆ. ಮುಸ್ಲಿಂ ಹುಡುಗಿ ತನ್ನ ಕಾಲೇಜಿನ ತರಗತಿಗೆ ಹಾಜರಾಗಿದ್ದಳು. ತರಗತಿಗಳಿಗೆ ಹಾಜರಾಗುವ ಮೊದಲು ಆಕೆ ಬುರ್ಖಾವನ್ನು ತೆಗೆಯಬೇಕಿದ್ದು ಆಕೆ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಹಸ್ತಾಂತರಿಸಿದ್ದಳು. ನಂತರ ಕ್ರಿಶ್ಚಿಯನ್ ಹುಡುಗಿ ಕಾಲೇಜಿಗೆ ಹಾಜರಾಗಿರಲಿಲ್ಲ. ಹಾಗಾಗಿ ಆಕೆಯ ಸ್ನೇಹಿತೆ ಸಂಜೆ ಕಾಲೇಜಿನ ಬಳಿ ಬುರ್ಖಾ ವಾಪಸ್ ಕೊಡಲು ಕಾಯುತ್ತಿದ್ದಳು. ಆದರೆ ಬುರ್ಖಾ ವಾಪಸ್ ಕೊಡುವಾಗ ಗುಂಪು ಅವರನ್ನು ಬೆದರಿಸಿ, ಥಳಿಸಿದ್ದು ಈ ಬಗ್ಗೆ ಫೊಕ್ಸೋ ಪ್ರಕರಣ ದಾಖಲಾಗಿತ್ತು
ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿ ಬಲವಂತ ಎಂಬರ್ಥದಲ್ಲಿ ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಎಕ್ಸ್ ನಲ್ಲಿ ಕಂಡುಬಂದ ಈ ಹೇಳಿಕೆ ಪ್ರಕಾರ, “ದಿ ಕರ್ನಾಟಕ ಸ್ಟೋರಿ..! ವಿಡಿಯೋದಲ್ಲಿರೋ ಬುರ್ಖಾ ತೊಟ್ಟ ಸಾಬಿನಿ ಇನ್ನೊಂದು ಹುಡುಗಿಯನ್ನು ಬ್ರೈನ್ವಾಶ್ ಮಾಡಿ ಆ ಹಿಂದೂ ಹುಡುಗಿಗೆ ಬುರ್ಖಾ ಧರಿಸುವಂತೆ ಹೇಳಿ ಕಾರಿಡಾರ್ನಲ್ಲಿ ನಿಂತ ತುರ್ಕನೊಂದಿಗೆ ಹೋಗುವಂತೆ ಹೇಳುತ್ತಿದ್ದಾಳೆ. ಈ ದರಿದ್ರ ಸಾಬೀಗಳು ಸಾಬಿನಿಯರದ್ದು ಒಂದೆ ಬುದ್ದಿ” ಎಂದಿದೆ.
Also Read: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವೇ?

ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ
ಇದೇ ರೀತಿಯ ಹೇಳಿಕೆಯಿರುವ ಎಕ್ಸ್ ಪೋಸ್ಟ್ ಗಳನ್ನು ನಾವು ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.


ಈ ಪ್ರಕರಣದ ಬಗ್ಗೆ ಸತ್ಯಶೋಧನೆ ನಡೆಸಲಾಗಿದ್ದು, 2021ರ ಘಟನೆಯನ್ನು ಕೋಮು ಬಣ್ಣ ನೀಡಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ನವೆಂಬರ್ 20, 2021ರಂದು ನಿಖರ ನ್ಯೂಸ್ ವರದಿಯಲ್ಲಿ “ಮಡಿಕೇರಿ ಬುರ್ಖಾ ವಿಚಾರವಾಗಿ ಹಲ್ಲೆ-ವೀಡಿಯೋ ವೈರಲ್: ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೋಕ್ಸೋ ಪ್ರಕರಣ ದಾಖಲು-ಇಬ್ಬರ ಬಂಧನ” ಎಂದಿದೆ. ಈ ಘಟನೆಯ ಕುರಿತ ವಿವರಗಣೆಯಲ್ಲಿ, ನವೆಂಬರ್ 18ರ ಗುರುವಾರ ಸಂಜೆ ಶನಿವಾರ ಸಂತೆಯ ಕೆಆರ್ ಸಿ ವೃತ್ತದಲ್ಲಿ ಈ ಘಟನೆ ನಡೆದಿದೆ. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. “ಗುರುವಾರ ಸಂಜೆ 4.15ರ ಸುಮಾರಿಗೆ ಶನಿವಾರ ಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿಗಳ ಮೇಲೆ ಸಂಘಟನೆಯೊಂದಕ್ಕೆ ಸೇರಿದ 40 ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ನಡೆಸಿತ್ತು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಮೇಲೆ ಸಂಘ ಪರಿವಾರಕ್ಕೆ ಸೇರಿದ ಕೆಲ ಹುಡುಗರು ಹಲ್ಲೆ ನಡೆಸಿದ್ದಾರೆ. ನನ್ನ ಮಗಳು ಗುರುವಾರ ಬೆಳಗ್ಗೆ ತನ್ನ ಕಾಲೇಜಿನ ತರಗತಿಗೆ ಹಾಜರಾಗಿದ್ದಳು. ತರಗತಿಗಳಿಗೆ ಹಾಜರಾಗುವ ಮೊದಲು ಆಕೆ ಬುರ್ಖಾವನ್ನು ತೆಗೆಯಬೇಕಿದ್ದು ನನ್ನ ಮಗಳು ತನ್ನ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಹಸ್ತಾಂತರಿಸಿದ್ದಳು. ಆ ದಿನ ಕ್ರಿಶ್ಚಿಯನ್ ಹುಡುಗಿ ಕಾಲೇಜಿಗೆ ಹಾಜರಾಗಿರಲಿಲ್ಲ. ಹಾಗಾಗಿ ಯಾಕೆಯ ಸ್ನೇಹಿತೆ ಸಂಜೆ ಕಾಲೇಜಿನ ಬಳಿ ಬುರ್ಖಾ ವಾಪಸ್ ಕೊಡಲು ಕಾಯುತ್ತಿದ್ದಳು. ಆದರೆ ಬುರ್ಖಾ ವಾಪಸ್ ಕೊಡುವಾಗ 40ಕ್ಕೂ ಹೆಚ್ಚು ಗೂಂಡಾಗಳು ತನ್ನ ಮಗಳು ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಣ್ಣುಮಕ್ಕಳಿಗೆ ಬೀಗ ಜಡಿದು ಥಳಿಸಿ ದೌರ್ಜನ್ಯ ಎಸಗಿದ್ದಾರೆ” ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ” ಎಂದಿದೆ.
Also Read: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ ಎನ್ನುವುದು ಸುಳ್ಳು

ನವೆಂಬರ್ 20, 2021ರ ನಮ್ಮ ಕುಡ್ಲನ್ಯೂಸ್.ಕಾಮ್ ವರದಿಯ ಪ್ರಕಾರ “ಬುರ್ಖಾ ವಿಚಾರವಾಗಿ 40 ಜನರಿಂದ ಅನೈತಿಕ ಪೊಲೀಸ್ ಗಿರಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು” ಎಂದಿದೆ. ಅನ್ಯ ಕೋಮಿನ ಯುವತಿಯರ ಮೇಲೆ ಸಂಘಟನೆಯೊಂದರ 40ಕ್ಕೂ ಹೆಚ್ಚು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ವೈರಲ್ ಆಗಿದೆ. ಶನಿವಾರಸಂತೆ ಕೆಆರ್ಸಿ ವೃತ್ತದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಇದೀಗ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ನವೆಂಬರ್ 19, 2021ರ ಕನ್ನಡಪ್ರಭ ವರದಿಯಲ್ಲಿ, “ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ಬುರ್ಖಾ ವಿಚಾರವಾಗಿ ಗಲಾಟೆ” ಎಂದಿದೆ. ಈ ವರದಿಯಲ್ಲಿ ಗುರುವಾರ ಸಂಜೆ 4.15ರ ಸುಮಾರಿಗೆ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿನಿಯರ ಮೇಲೆ 40ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಸಂತ್ರಸ್ಥ ಬಾಲಕಿಯ ತಂದೆ, ‘ನನ್ನ ಮಗಳು ಮತ್ತು ಅವಳ ಸ್ನೇಹಿತೆಯ ಮೇಲೆ ಸಂಘಪರಿವಾರದ ಹುಡುಗರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ನನ್ನ ಮಗಳು ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳು. ತರಗತಿಗಳಿಗೆ ಪ್ರವೇಶಿಸುವ ಮೊದಲು ಅವರು ಬುರ್ಖಾವನ್ನು ತೆಗೆದುಹಾಕಬೇಕು. ಹೀಗಾಗಿ ನನ್ನ ಮಗಳು ತನ್ನ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಬೆಳಿಗ್ಗೆ ನೀಡಿದ್ದಳು. ಕ್ರಿಶ್ಚಿಯನ್ ಹುಡುಗಿ ಗುರುವಾರ ಕಾಲೇಜಿಗೆ ಹಾಜರಾಗಿರಲಿಲ್ಲ. ಹೀಗಾಗಿ ಆಕೆಯ ಸ್ನೇಹಿತೆ ಸಂಜೆ ಬುರ್ಖಾವನ್ನು ಹಿಂದಿರುಗಿಸಲು ಕಾಲೇಜಿನ ಬಳಿ ಕಾಯುತ್ತಿದ್ದರು. ಆದರೆ, ಬುರ್ಖಾವನ್ನು ಹಿಂತಿರುಗಿಸುವಾಗ, ನನ್ನ ಮಗಳು ಮತ್ತು ಅವಳ ಸ್ನೇಹಿತೆಯ ಮೇಲೆ 40 ಕ್ಕೂ ಹೆಚ್ಚು ಗೂಂಡಾಗಳು ದಾಳಿ ನಡೆಸಿದರು. ಅಲ್ಲದೆ ಬಾಲಕಿಯರನ್ನು ಬೀಗ ಜಡಿದು, ಥಳಿಸಿ, ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು. ಎಂದಿದೆ.
ಈ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ನವೆಂಬರ್ 23, 2021ರಂದು ದಿ ನ್ಯೂಸ್ ಮಿನಿಟ್ ಮಾಡಿದ ವರದಿಯಲ್ಲಿ “ ಕೇವಲ ಎರಡೇ ವಾರದಲ್ಲಿ ಕರ್ನಾಟಕದ ಕೊಡಗಿನಲ್ಲಿ ಐದು ದ್ವೇಷ ಅಪರಾಧಗಳು ವರದಿ” ಎಂಬ ಶೀರ್ಷಿಕೆಯಡಿ ಕೊಡಗಿನ ಶನಿವಾರ ಸಂತೆಯಲ್ಲಿ ನಡೆದ ಘಟನೆ ಬಗ್ಗೆ ಹೇಳಲಾಗಿದೆ. ಶನಿವಾರ ಸಂತೆಯ ಬಸ್ ನಿಲ್ದಾಣದಲ್ಲಿ ಹಿಂದುತ್ವದ ಗುಂಪು, ಇಬ್ಬರು ಹುಡುಗಿಯರಿಗೆ ಬಯ್ದು ಹೊಡೆದ ಘಟನೆ ನಡೆದಿದೆ. ಇದರಲ್ಲಿ ಮುಸ್ಲಿಂ ಯುವತಿಯೊಬ್ಬಳು ಕ್ರಿಶ್ಚಿಯನ್ ಯುವತಿಗೆ ಬುರ್ಖಾ ಕೊಟ್ಟು ತೊಡುವಂತೆ ಹೇಳಿದ್ದಳು. 30 ಜನರ ಗುಂಪು ಆ ಯುವತಿಯರನ್ನು ಪ್ರಶ್ನಿಸಿದ್ದು, ಬೇರೆಯವರಿಗೆ ಬುರ್ಖಾ ತೊಡುವಂತೆ ಹೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯಲ್ಲಿ ಹುಡುಗಿಯರನ್ನು ಬೆದರಿಸಿದ್ದಕ್ಕಾಗಿ ಪ್ರಜ್ವಲ್ ಮತ್ತು ಕೌಶಿಕ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದಿದೆ.

ಈ ಪ್ರಕರಣದ ವರದಿಯನ್ನು ದೈಜಿವರ್ಲ್ಡ್ ಕೂಡ ಮಾಡಿದ್ದು ಅದು ಇಲ್ಲಿದೆ.
ಈ ವರದಿಗಳ ಅನ್ವಯ, ಹಿಂದೂ ಹುಡುಗಿಯನ್ನು ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಯುವತಿ ಹೇಳುತ್ತಿದ್ದಾಳೆ ಎನ್ನುವ ಹೇಳಿಕೆ ತಪ್ಪಾಗಿದೆ. ಮಡಿಕೇರಿಯ ಶನಿವಾರ ಸಂತೆಯಲ್ಲಿ 2021ರಲ್ಲಿ ನಡೆದ ಪ್ರಕರಣ ಇದಾಗಿದ್ದು ಮುಸ್ಲಿಂ ಹುಡುಗಿಗೆ ಬುರ್ಖಾ ಹಸ್ತಾಂತರಿಸುವ ವೇಳೆ ಗುಂಪು ಅವರನ್ನು ಬೆದರಿಸಿ, ಥಳಿಸಿದೆ. ಈ ಕುರಿತು ಪೋಕ್ಸೋ ಪ್ರಕರಣ ದಾಖಲಾಗಿದೆ.
Also Read: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
Our Sources:
Report By Nikhara News, Dated: November 21, 2021
Report By Namma kudla, Dated: November 20, 2021
Report By Kannadaprabha, Dated: November 19, 2022
Report By The Newsminute, Dated: November 23, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 25, 2025
Ishwarachandra B G
March 29, 2025
Vasudha Beri
March 24, 2025