ಶುಕ್ರವಾರ, ಮಾರ್ಚ್ 29, 2024
ಶುಕ್ರವಾರ, ಮಾರ್ಚ್ 29, 2024

Home 2023 ಫೆಬ್ರವರಿ

Monthly Archives: ಫೆಬ್ರವರಿ 2023

Fact Check: ಮಾರ್ಚ್‌ 1ರಿಂದ ಕರ್ನಾಟಕ ಬಂದ್‌ ಇದೆಯೇ? ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?

ಮಾರ್ಚ್ 1 ರಿಂದ ಕರ್ನಾಟಕ ಬಂದ್‌ ಎಂಬ ರೀತಿಯ ಮೆಸೇಜ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ನಲ್ಲಿ “ರಾಜ್ಯದಲ್ಲಿ ಮಾ.1ರಿಂದ ಸಂಪೂರ್ಣ ಬಂದ್! ರಾಜ್ಯದಲ್ಲಿ ಮಾ.1ರಿಂದ ಆಸ್ಪತ್ರೆ, ಶಾಲೆ, ಕಚೇರಿ, ಸಾರಿಗೆ ಸೇರಿ ಎಲ್ಲ ಸರ್ಕಾರಿ ಸೇವೆಗಳು ಬಂದ್ ಆಗಲಿದೆ. 7ನೇ ವೇತನ ಆಯೋಗ ಜಾರಿ ಒತ್ತಾಯಿಸಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಮುಷ್ಕರಕ್ಕೆ ಶಿಕ್ಷಕರು, ಕೆಎಸ್‌ಆರ್‌ಟಿಸಿ-ಬಿಎಂಟಿಸಿ, ಆಸ್ಪತ್ರೆ &...

Weekly Wrap: ರಿಷಬ್‌ ಶೆಟ್ಟಿಗೆ ದಾದಾ ಸಾಹೇಬ್‌ ಫಾಲ್ಕೆ, ನಂದಿನಿ ಮೇಲೆ ಹಿಂದಿ ಹೇರಿಕೆ, ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ ನೋಟ

ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿಯವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಎನ್ನುವುದು ಈ ವಾರ ಸುದ್ದಿ ಮಾಡಿದೆ. ರಿಷಬ್‌ ಶೆಟ್ಟಿಯವರಿಗೆ ನಿಜಕ್ಕೂ ಸಿಕ್ಕಿದ್ದು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯೇ ಎಂಬುದು ಸಂಶಯಕ್ಕೆಡೆ ಮಾಡಿದ್ದು, ಇದು ದಾದಾ ಸಾಹೇಬ್‌ ಪ್ರಶಸ್ತಿಯಲ್ಲ, ಬದಲಾಗಿ ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ ಪ್ರಶಸ್ತಿ ಎನ್ನುವುದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ. ಇನ್ನು ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ...

Fact Check: ನಂದಿನಿ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆ? ಕ್ಲೇಮ್‌ ಹಿಂದಿನ ಸತ್ಯ ಏನು?

ಪ್ರಸಿದ್ಧ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ, ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ  ಈ ಕುರಿತು ಕಿರಿಕ್ ಗೆ ಕಾರ‌್ತಿಕ್ l KIRIK ge K@rTH!K ಎಂಬ ಬಳಕೆದಾರು ಹಾಕಿದ ಕ್ಲೇಮ್‌ ಒಂದು ಕಂಡುಬಂದಿದ್ದು ಅದರಲ್ಲಿ, : ಹಿಂದಿ ಅಂದರೆ ಇಂಡಿಯಾ ಅಂದುಕೊಂಡಿದ್ದಾರೆ ಈ ಬಿಜೆಪಿ ಮತ್ತು ಸಿಎಂ ಕರ್ನಾಟಕ ಅವರು. ಕನ್ನಡನಾಡ...

Fact Check: ರಿಷಬ್ ಶೆಟ್ಟಿಗೆ ನಿಜಕ್ಕೂ ಸಿಕ್ಕಿದ್ದು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯೇ?

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ. ಅತ್ಯಂತ ಭರವಸೆಯ ನಟ ಎಂದು ಅವರನ್ನು ಗುರುತಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡಿವೆ.

ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್‌ ತೊಲೆ; ಆ ದುರ್ಘಟನೆ ನಿಜಕ್ಕೂ ಅಲ್ಲಿ ನಡೆದಿದ್ದಲ್ಲ!

ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್‌ ತೊಲೆ ಎಂದು ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಟ್ಸಾಪಿನಲ್ಲಿ ಹರಿದಾಡುತ್ತಿರುವ ವೈರಲ್‌ ವೀಡಿಯೋದ ಕ್ಲೇಮಿನಲ್ಲಿ “ಥಾಣೆಯಲ್ಲಿ ನಡೆದ” ಎಂದು ಹೇಳಲಾಗಿದ್ದು, ಸಿಮೆಂಟ್‌ನ ದೊಡ್ಡ ತೊಲೆಯೊಂದು ಹಲವು ಕಾರುಗಳ ಮೇಲೆ ಕುಸಿದು ಬಿದ್ದ ದೃಶ್ಯ ಇದೆ. ಕಾರುಗಳಲ್ಲಿ ಪ್ರಯಾಣಿಕರು ಇನ್ನೂ ಇರುವ ದಾರುಣ ದೃಶ್ಯ ಕಾಣುತ್ತದೆ ಮತ್ತು ಜನರು ಗಾಬರಿಯಿಂದ ರಕ್ಷಣೆಗೆ ಓಡಾಡುತ್ತಿರುವುದು, ಭಾರೀ ಗಾತ್ರದ ಸಿಮೆಂಟ್‌ ತೊಲೆಯನ್ನು...

ವಾಲ್ನಟ್‌ನಿಂದಾಗಿ ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತಾ? 

ವಾಲ್‌ನಟ್‌ಗಳನ್ನು ತಿಂದರೆ ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಫೇಸ್‌ಬುಕ್‌ನಲ್ಲಿ ಕಂಡು ಬಂದ ಈ ಕ್ಲೇಮ್‌ ಪ್ರಕಾರ “ನಿಮಗಿದು ಗೊತ್ತಾ? ವೀರ್ಯಾಣುಗಳ ಗುಣಮಟ್ಟ ಹೆಚ್ಚಿಸಲು ಬಯಸುವಿರಾ? ವಾಲ್ ನಟ್‌ (ಆಕ್ರೋಟ್) ತಿನ್ನಿರಿ” ಎಂದು ಹೇಳಲಾಗಿದೆ.  ಈ ಕ್ಲೇಮಿನ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ. Fact check/ Verification ಲಭ್ಯ ಇರುವ ಸ್ಕಾಂಟ್‌ ಸಾಕ್ಷ್ಯಗಳ ಪ್ರಕಾರ,...

ಇಂದಿರಾ ಗಾಂಧಿ, ರಾಜ್‌ ಕುಮಾರ್‌ ಜೊತೆಗೆ ಫೋಟೋದಲ್ಲಿ ಮೋದಿಯೂ ಇದ್ದರೇ?

ನಟ ರಾಜ್‌ಕುಮಾರ್‌ ಮತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ಪ್ರಧಾನಿ ಮೋದಿಯವರಿದ್ದ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.  ವಾಟ್ಸಾಪ್‌ ನಲ್ಲಿರುವ ಕ್ಲೇಮಿನಲ್ಲಿ, “ಡಾ.ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ ಕುಮಾರ್, ಇಂದಿರಾ ಗಾಂಧಿ ಹಾಗೂ ನರೇಂದ್ರ ಮೋದಿಯವರಿರುವ ಅಪರೂಪದ ಚಿತ್ರ” ಎಂದು ಹೇಳಲಾಗಿದೆ.  ಸತ್ಯಶೋಧನೆಗಾಗಿ ಈ ಕ್ಲೇಮ್‌ ಅನ್ನು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ಲೈನ್‌ಗೆ ಬಳಕೆದಾರರೊಬ್ಬರು ಕಳುಹಿಸಿದ್ದು, ಈ ಕ್ಲೇಮ್‌ ತಿರುಚಲಾದ ಚಿತ್ರ ಎಂದು ಕಂಡುಬಂದಿದೆ.  Fact Check/...

ಏರ್‌ಶೋದಲ್ಲಿ ಸುಖೋಯ್‌ ವಿಮಾನದ ಈ ಪ್ರದರ್ಶನ ನಿಜವೇ; ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ಶೋದಲ್ಲಿ ಸುಖೋಯ್‌ ವಿಮಾನದ ಪ್ರದರ್ಶನ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಫೇಸ್‌ಬುಕ್‌ನಲ್ಲಿ ಬಿಟಿವಿ ನ್ಯೂಸ್‌ ಪೋಸ್ಟ್‌ ಮಾಡಿದ ಆ ಕ್ಲೇಮ್‌ ಪ್ರಕಾರ, “AirShow2023 : ಸುಖೋಯ್ ಅದ್ಭುತ ಪ್ರದರ್ಶನ..ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸುಖೋಯ್..!” ಎಂದು ಹೇಳಲಾಗಿದೆ.  ಈ ವೀಡಿಯೋದಲ್ಲಿ ಸುಖೋಯ್‌ ಯುದ್ಧ ವಿಮಾನ ನೆಲದಿಂದ ಕೆಲವೇ ಕೆಲವು ಅಡಿ ಅಂತರದಲ್ಲಿ ನೇರವಾಗಿ ನಿಂತಿರುವಂತೆ ಇದ್ದು, ಅದ್ಭುತ...

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ಕುಟುಂಬಗಳಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಕೊಡುವುದು ಸತ್ಯವೇ?

ಕರ್ನಾಟಕ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಕೀಯ ಪಕ್ಷಗಳು ವಿವಿಧ ಆಶ್ವಾಸನೆಗಳನ್ನು ನೀಡುತ್ತಿವೆ. ಇದಕ್ಕೆ ಪೂರಕವಾಗಿ, ವಿವಿಧೆಡೆ ಅಧಿಕಾರದಲ್ಲಿರುವ ಪಕ್ಷಗಳು ಕರ್ನಾಟಕದಲ್ಲೂ ಅದೇ ಆಶ್ವಾಸನೆಯನ್ನು ಪೂರೈಸಲಾಗುವುದು ಎಂಬ ರೀತಿ ಹೇಳಲಾಗುತ್ತಿದೆ.  ಇಂತಹ ಒಂದು ಕ್ಲೇಮಿನಲ್ಲಿ ನುಡಿದಂತೆ ನಡೆದ ನಮ್ಮ ಕಾಂಗ್ರೆಸ್‌ ಸರ್ಕಾರ ಎಂದು ಪೋಸ್ಟ್‌ ಒಂದನ್ನು ಮಾಡಲಾಗಿದೆ. ಈ ಪೋಸ್ಟ್‌ನಲ್ಲಿ “ರಾಜಸ್ಥಾನ ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ಮಹತ್ವದ ಘೋಷಣೆ, ಇದೇ 2023 ರಿಂದ ರಾಜ್ಯದ ಎಲ್ಲ...

ಕಬಿನಿಯಲ್ಲಿ ಕೃಷ್ಣಮೃಗವನ್ನು ಮೊಸಳೆ ಬೆನ್ನಟ್ಟಿದೆಯೇ?; ಸತ್ಯ ಇಲ್ಲಿದೆ! 

ಕಬಿನಿ ಅರಣ್ಯ ವ್ಯಾಪ್ತಿಯಲ್ಲಿ ಕೃಷ್ಣಮೃಗವೊಂದನ್ನು ಮೊಸಳೆ ಬೆನ್ನಟ್ಟುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ನದಿಯಲ್ಲಿ ಮೊಸಳೆ ಕೃಷ್ಣಮೃಗವನ್ನು ಹಿಂಬಾಲಿಸುತ್ತಿದ್ದು, ಬೇಟೆಗೆ ಪ್ರಯತ್ನಿಸುತ್ತದೆ. ಕೊನೆಗೆ ಹೇಗೋ ಕೃಷ್ಣಮೃಗ ಮೊಸಳೆ ಬಾಯಿಗೆ ಆಹಾರವಾಗುವುದರಿಂದ ಪಾರಾಗಿ ದಡ ಸೇರುತ್ತಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ. ಇನ್‌ಸ್ಟಾ ಗ್ರಾಂನಲ್ಲಿ ಕಂಡು ಬಂದ ಈ ಕ್ಲೇಮ್‌ ಹೀಗಿದೆ. “ಕಬಿನಿ ನದಿಯಲ್ಲಿ ಕಂಡ ಅದ್ಭುತ ದೃಶ್ಯ. ಭೂಮಿ ಮೇಲೆ ಹುಟ್ಟಿದ...