Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?

ಭಾರತ ಮಾತೆ, ರಾಹುಲ್‌ ಗಾಂಧಿ, ಅವಮಾನ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಭಾರತ ಮಾತೆಯನ್ನು ಅವಮಾನಿಸಿದರು


Fact
ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಭಾರತ ಮಾತೆಯನ್ನು ಅವಮಾನಿಸಿಲ್ಲ. ರಾಹುಲ್‌ ಅವರ ಭಾಷಣದ ಒಂದು ಕ್ಲಿಪ್‌ ಮಾತ್ರ ಹೆಕ್ಕಿ ತೆಗೆದು ತಪ್ಪಾಗಿ ಚಿತ್ರಿಸಲಾಗಿದೆ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಭೆಯೊಂದರಲ್ಲಿ ಭಾರತ ಮಾತೆ ಅಂದರೆ ಯಾರು ಎಂದು ಕೇಳುತ್ತಿದ್ದಾರೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್‌ ಗಾಂಧಿಯವರಿಗೆ ಭಾರತ ಮಾತೆ ಬಗ್ಗೆ ಗೊತ್ತಿಲ್ಲ ಮತ್ತು ಅವರು ಭಾರತ ಮಾತೆಯನ್ನು ಅವಮಾನಿಸುತ್ತಿದ್ದಾರೆ ಎಂಬ ಹೇಳಿಕೆಗಳೊಂದಿಗೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್ಬುಕ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಭಾರತ ಮಾತೆ ಯಾರು ಅನ್ನೋದೇ ಗೊತ್ತಿಲ್ಲದ ಇವರು ಭಾರತ್ ಜೋಡೋ ಅನ್ನೋ ಯಾತ್ರೆ ಮಾಡಿದ್ದರು..” ಎಂದಿದೆ.

Also Read: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?

Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?
ಫೇಸ್‌ಬುಕ್‌ ಕ್ಲೇಮ್

ಆದಾಗ್ಯೂ, ವೈರಲ್ ವೀಡಿಯೋದ ಒಂದು ಭಾಗವನ್ನು ಮಾತ್ರ ಹಾಕಲಾಗಿದೆ ಎಂದು ನಾವು ತನಿಖೆಯಲ್ಲಿ ಕಂಡುಕೊಂಡಿದ್ದೇವೆ. ರಾಜಸ್ಥಾನದ ಬುಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಬುಡಕಟ್ಟು, ಹಿಂದುಳಿದವರು ಮತ್ತು ದಲಿತರನ್ನು ಭಾರತ ಮಾತೆ ಎಂದು ಬಣ್ಣಿಸಿದ್ದರು.

ವೈರಲ್‌ ಆಗಿರುವ 0.18 ಸೆಕೆಂಡುಗಳದ್ದಾಗಿದೆ. ವೀಡಿಯೋದಲ್ಲಿ, ರಾಹುಲ್ ಗಾಂಧಿ ಅವರು, “ಎಲ್ಲರೂ ಈ ಘೋಷಣೆಯನ್ನು ಮಾಡುತ್ತಾರೆ, ನಾವು ಭಾರತ ಮಾತೆಗೆ ಜೈ ಎಂದು ಸಾಕಷ್ಟು ಹೇಳುತ್ತಾರೆ. ಆದರೆ ಈ ಭಾರತ ಮಾತೆ ಯಾರು, ಇದು ಏನು” ಎಂದು ಕೇಳುತ್ತಾರೆ. ರಾಹುಲ್ ಅವರ ಈ ಮಾತುಗಳನ್ನು ಗುರಿಯಾಗಿಸಿಕೊಂಡು ಹಲವು ವೆರಿಫೈಡ್ ಎಕ್ಸ್‌ ಖಾತೆಗಳಿಂದಲೂ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ..

ಆಂಧ್ರಪ್ರದೇಶದ ಬಿಜೆಪಿ ನಾಯಕ ರಮೇಶ್ ನಾಯ್ಡು ಅವರು ತಮ್ಮ ಎಕ್ಸ್ ಖಾತೆಯಿಂದ ವೈರಲ್ ಆಗಿರುವ ವೀಡಿಯೋವನ್ನು ಹಂಚಿಕೊಂಡಿದ್ದು, “ರಾಹುಲ್ ಗಾಂಧಿ ಅವರು ಭಾರತ್ ಮಾತಾ ಯಾರು ಮತ್ತು ಭಾರತ್ ಮಾತಾ ಕಿ ಜೈ ಎಂದರೇನು ಎಂದು ಕೇಳಿದರು. ಪ್ರಧಾನಿ ಮೋದಿ ಮೇಲಿನ ಅವರ ದ್ವೇಷವು ಭಾರತದ ಮೇಲಿನ ದ್ವೇಷವಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದ್ದಾರೆ.

Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?
ರಮೇಶ್‌ ನಾಯ್ಡು ಟ್ವೀಟ್

ಭಾರತೀಯ ಜನತಾ ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಈ ವೀಡಿಯೋವನ್ನು ಹಂಚಿಕೊಂಡಿದೆ.

Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?
ಬಿಜೆಪಿ ಟ್ವೀಟ್

ಇದೇ ರೀತಿಯ ಎಕ್ಸ್ ಪೋಸ್ಟ್ ಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.

Fact Check/Verification

ವೈರಲ್ ಹೇಳಿಕೆಯ ಬಗ್ಗೆ ತನಿಖೆ ನಡೆಸಲು ನ್ಯೂಸ್ಚೆಕರ್ ಮೊದಲು ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ನ ಟ್ವೀಟ್ ಅನ್ನು ಪರಿಶೀಲಿಸಿದೆ. ಈ ವೇಳೆ ನವೆಂಬರ್ 20 ರಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಘಟಕದ ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ ಅವರು ಮಾಡಿರುವ ಟ್ವೀಟ್ ಕಂಡುಬಂದಿದೆ.

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?
ಸುಪ್ರಿಯಾ ಶ್ರೀನಾಟೆ ಟ್ವೀಟ್

ಈ ಟ್ವೀಟ್ನಲ್ಲಿ, ಅವರು ಸುಮಾರು 3 ನಿಮಿಷ 40 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಬಿಜೆಪಿ ಹಂಚಿಕೊಂಡ ವೈರಲ್ ವೀಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಈ ವೀಡಿಯೋದ ಆರಂಭದಲ್ಲಿ, ವೈರಲ್ ವೀಡಿಯೋದ ಭಾಗವನ್ನು ನಾವು ಗುರುತಿಸಿದ್ದೇವೆ. ಇದರಲ್ಲಿ ರಾಹುಲ್ ಗಾಂಧಿ, “ಚಂದನಾ ಜಿ ಈಗಷ್ಟೇ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ಹಾಕಿದ್ದಾರೆ. ಆದ್ದರಿಂದ ಪ್ರಶ್ನೆಯೆಂದರೆ ಎಲ್ಲರೂ ಈ ಘೋಷಣೆಯನ್ನು ಕೂಗುತ್ತಾರೆ, ನಾವು ಸಾಕಷ್ಟು ‘ಭಾರತ್ ಮಾತಾ ಕೀ ಜೈ’ ಎಂದು ಕೇಳುತ್ತೇವೆ. ಆದರೆ ಈ ಭಾರತ ಮಾತೆ ಯಾರು, ಇದು ಏನು ಎಂಬ ಪ್ರಶ್ನೆ ಇದೆ. ನಾವೆಲ್ಲರೂ ಗೆದ್ದರೆ, ಎಲ್ಲರೂ ಅದನ್ನು ಮಾಡುತ್ತಾರೆ, ನಾನು ಮಾಡುತ್ತೇನೆ, ನೀವು ಅದನ್ನು ಮಾಡುತ್ತೀರಿ, ಹಾಗಾದರೆ ಈ ಭಾರತ ಮಾತೆ ಯಾರು? ಎಂದು ಕೇಳುತ್ತಾರೆ”

ಬಳಿಕ ರಾಹುಲ್‌ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ.. “ನೋಡಿ, ಭಾರತ ಮಾತೆ ಈ ಭೂಮಿ. ಇವರು ಈ ದೇಶದ ಜನರು, ಭಾರತ ಮಾತೆ. ನಿಮ್ಮ ಸಹೋದರರು, ಸಹೋದರಿಯರು, ತಾಯಂದಿರು, ತಂದೆಯರು, ಬಡವರು, ಶ್ರೀಮಂತರು, ವೃದ್ಧರು, ಪ್ರತಿಧ್ವನಿಸುವ ಎಲ್ಲರು ಭಾರತ ಮಾತೆಯ ಧ್ವನಿ. ಇದು ಭಾರತ ಮಾತೆ. ಆದ್ದರಿಂದ ನಾನು ಸಂಸತ್ತಿನಲ್ಲಿ ಭಾಷಣ ಮಾಡುತ್ತಿರುವ ವೇಳೆ ಹೀಗೆ ಹೇಳಿದೆ, ‘ನೋಡಿ, ಈ ಭಾರತ ಮಾತೆ ಯಾರು ಎಂದು ನಾನು ತಿಳಿಯಲು ಬಯಸುತ್ತೇನೆ, ಅಂದರೆ ಈ ಜನರು ಯಾರು? ಎಷ್ಟು ಜನಸಂಖ್ಯೆಯನ್ನು ಹೊಂದಿದೆ? ಎಷ್ಟು ಬುಡಕಟ್ಟು ಜನರು, ಎಷ್ಟು ದಲಿತರು, ಎಷ್ಟು ಹಿಂದುಳಿದವರು, ಎಷ್ಟು ಬಡವರು ಮತ್ತು ಶ್ರೀಮಂತರು ಇದ್ದಾರೆ?. ನಾವು ‘ಭಾರತ್ ಮಾತಾ ಕೀ ಜೈ’ ಎಂದು ಜಪಿಸಿದರೆ ಮತ್ತು ಅದಕ್ಕಾಗಿ ನಾವು ನಮ್ಮ ಪ್ರಾಣವನ್ನು ಅರ್ಪಿಸಿದರೆ, ಭಾರತ್ ಮಾತೆ ಯಾರು ಎಂದು ನಾವು ಕಂಡುಹಿಡಿಯಬೇಕಾಗುತ್ತದೆ.. ಈ ದೇಶದಲ್ಲಿ ಎಷ್ಟು ಹಿಂದುಳಿದವರು, ಎಷ್ಟು ದಲಿತರು, ಎಷ್ಟು ಬಡವರು ಎಂದು ನಮಗೆ ತಿಳಿದಿಲ್ಲದಿದ್ದರೆ, ಭಾರತ್ ಮಾತಾ ಕಿ ಜೈ ಎಂದರೇನು ಪ್ರಯೋಜನ? ಆದ್ದರಿಂದ, ಈ ದೇಶವು ಈಗ ಕ್ರಾಂತಿಕಾರಿ ಕೆಲಸವನ್ನು ಮಾಡಬೇಕಾಗಿದೆ. ಈ ದೇಶವು ಜನಾಂಗೀಯ ಜನಗಣತಿಯನ್ನು ನಡೆಸಬೇಕಾಗುತ್ತದೆ.” ಎಂದಿದ್ದಾರೆ.

ತನಿಖೆಯ ಸಮಯದಲ್ಲಿ, ರಾಹುಲ್ ಗಾಂಧಿ ಅವರ ಅಧಿಕೃತ ಯೂಟ್ಯೂಬ್ ಖಾತೆಯಿಂದ ನವೆಂಬರ್ 19, 2023 ರಂದು ಲೈವ್ ಮಾಡಿದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ರಾಜಸ್ಥಾನದ ಬುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಸಂಪೂರ್ಣ ಭಾಷಣ ಈ ವೀಡಿಯೋದಲ್ಲಿದೆ.

35 ನಿಮಿಷಗಳ ವೀಡಿಯೋವನ್ನು ವೀಕ್ಷಿಸಿದ ಬಳಿಕ ರಾಹುಲ್ ಗಾಂಧಿ, ಭಾರತ ಮಾತೆ ಮತ್ತು ಜಾತಿ ಜನಗಣತಿಯ ಅರ್ಥವನ್ನು ಉಲ್ಲೇಖಿಸುವಾಗ, “ದೇಶದಲ್ಲಿ ಕನಿಷ್ಠ 50 ಪ್ರತಿಶತ ಹಿಂದುಳಿದ ಜನರಿದ್ದಾರೆ ಎಂದು ನಾನು ಊಹಿಸಬಲ್ಲೆ. ಅವರನ್ನು ಹಿಂದುಳಿದವರು, ಒಬಿಸಿಗಳು, ಕಾರ್ಮಿಕರು, ರೈತರು ಎಂದು ಕರೆಯಿರಿ. ಜನಸಂಖ್ಯೆಯಲ್ಲಿ ದಲಿತರು ಶೇ.15ರಷ್ಟಿದ್ದರೆ, ಬುಡಕಟ್ಟು ಜನಾಂಗದವರು ಶೇ.12-14ರಷ್ಟಿದ್ದಾರೆ. ಅಂದರೆ, ಭಾರತ ಮಾತೆಯ ಅತಿದೊಡ್ಡ ಭಾಗ ದಲಿತ, ಬುಡಕಟ್ಟು ಮತ್ತು ಹಿಂದುಳಿದವರು ಆಗಿದ್ದಾರೆ ಎಂದು ಹೇಳುತ್ತಾರೆ.

 19 ನವೆಂಬರ್ 2023 ರಂದು ಅಮರ್ ಉಜಾಲಾ ಪ್ರಕಟಿಸಿದ ವರದಿಯನ್ನು ನಾವು ಪತ್ತೆ ಮಾಡಿದ್ದು, ಅದರಲ್ಲಿ ಬುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾರತ ಮಾತೆಯನ್ನು ಉಲ್ಲೇಖಿಸುವ ಮೂಲಕ ಜಾತಿ ಜನಗಣತಿಯ ಬಗ್ಗೆ ಪಣತೊಟ್ಟಿದ್ದಾರೆ ಎಂದು ಹೇಳಿದೆ. ಈ ಸಂದರ್ಭದಲ್ಲಿ, ಜಾತಿ ಜನಗಣತಿಗೆ ಒತ್ತಾಯಿಸಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು ಎಂದಿದೆ.

Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?
ಅಮರ್ ಉಜಾಲಾ ವರದಿ

Conclusion 

ಈ ಸತ್ಯಶೋಧನೆಯ ಪ್ರಕಾರ ರಾಜಸ್ಥಾನದ ಬುಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ದೇಶದ ಬುಡಕಟ್ಟು, ಹಿಂದುಳಿದವರು ಮತ್ತು ದಲಿತರನ್ನು ಭಾರತ ಮಾತೆ ಎಂದು ಬಣ್ಣಿಸಿದ್ದಾರೆ. ವೈರಲ್‌ ಆಗಿರುವ ವೀಡಿಯೋ ಅವರ ಭಾಷಣದ ಒಂದು ಕ್ಲಿಪ್ ಮಾತ್ರ ಆಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.  

Also Read: ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್‌ ಕ್ಲೇಮ್‌ ಸುಳ್ಳು

Result: Missing Context

Our sources
Tweet by Supriya Shrinet Dated: November 19, 2023

YouTube Video By Rahul Gandhi, Dated: November 19, 2023

Report By Amar Ujala, Dated: November 19, 2023

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.