Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸ್ಫೇನ್ ನಲ್ಲಿ ಜನರಿಂದ ಮಸೀದಿಗೆ ಬೆಂಕಿ, ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆ, ಚಂದನ್ ಮಿಶ್ರಾ ಕೊಲೆ ಪ್ರಕರಣದ ಆರೋಪಿಗಳಿಗೆ ಗುಂಡೇಟು, ಇಂದೋರ್ ನಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ನಿಂದ ನೀರು ಎರಚುವ ವೀಡಿಯೋ, ಶೇಂದಿ ಕುಡಿಯುವುದರಿಂದ ಕಾಮಾಲೆ ಮತ್ತು ಸೋಂಕುಗಳನ್ನು ತಡೆಯಬಹುದು ಎಂಬ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ಸುಳ್ಳು ಹೇಳಿಕೆಗಳು ಎಂದು ಸಾಕ್ಷ್ಯ ಸಮೇತ ತೆರೆದಿಟ್ಟಿದೆ. ಈ ಕುರಿತ ವಾರದ ವರದಿ ಇಲ್ಲಿದೆ

ಸ್ಪೇನ್ ನ ಬಾರ್ಸಿಲೋನಾದಲ್ಲಿ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇಂಡೋನೇಷ್ಯಾದಲ್ಲಿ ಮಸೀದಿಯಲ್ಲಿ ಆದ ಬೆಂಕಿ ಅವಘಡದ ದೃಶ್ಯ ಇದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ಎಣ್ಣೆ ಸಿಕ್ಕಿದೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆ ಎಂದು ಹಂಚಿಕೊಳ್ಳುತ್ತಿರುವ ವೀಡಿಯೋ ಗುಜರಾತ್ ನದ್ದಾಗಿದ್ದು ರಾಧಾನ್ಪುರ ಹೈವೇಯಲ್ಲಿ ಎಣ್ಣೆ ಟ್ಯಾಂಕರ್ ಆಕ್ಸಿಡೆಂಟ್ ಬಳಿಕದ ವಿದ್ಯಮಾನವಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಪಾಟ್ನಾದಲ್ಲಿ ಗ್ಯಾಂಗ್ ಸ್ಟರ್ ಚಂದನ್ ಮಿಶ್ರಾ ಹತ್ಯೆಯ ಆರೋಪಿಗಳಿಗೆ ಪೊಲೀಸರು, ಕಾಲಿಗೆ ಗುಂಡೇಟು ಹೊಡೆದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ಮಾಡಿದಾಗ, ಕಾಲಿಗೆ ಗುಂಡೇಟು ಹೊಡೆದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಲು ರಾಜಸ್ಥಾನದ ಪ್ರಕರಣವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಮಧ್ಯಪ್ರದೇಶದ ಇಂದೋರ್ ನಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ನೀರು ಎರಚುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ನೀರು ಎರಚಿದ ವೀಡಿಯೋ ಪೆರುವಿನ ರಾಜಧಾನಿ ಲಿಮಾದ್ದಾಗಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಶೇಂದಿ/ನೀರಾ ಕುಡಿಯುವುದರಿಂದ ಕಾಮಾಲೆ ಮತ್ತು ಮೂತ್ರನಾಳದ ಸೋಂಕುಗಳನ್ನು ತಡೆಯಬಹುದು ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಶೇಂದಿ ಕುಡಿಯುವುದರಿಂದ ಕಾಮಾಲೆ ಮತ್ತು ಸೋಂಕುಗಳನ್ನು ತಡೆಯಬಹುದು ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ
Ishwarachandra B G
October 18, 2025
Newschecker and THIP Media
July 25, 2025
Runjay Kumar
July 24, 2025