Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ದೆಹಲಿ ಕಾರು ಬಾಂಬ್ ಸ್ಫೋಟದ ಫೋಟೋ ಎಂದು ಲೆಬನಾನ್ ಸ್ಫೋಟದ ಫೋಟೋ ವೈರಲ್, ಬಿಹಾರ ಚುನಾವಣೇಲಿ ಬಿಜೆಪಿ ವಿರುದ್ಧ ಹೋದರೆ ದೆಹಲಿ ಸ್ಫೋಟದಂತ ಪರಿಣಾಮ ಎಂದು ಯೋಗಿ ಎಚ್ಚರಿಕೆ, ತಮಿಳುನಾಡು ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ನಿಂದ ಸ್ಟ್ರೆಚರ್ ನೊಂದಿಗೆ ಹೊರಬಿದ್ದ ರೋಗಿ, ಚಂದ್ರಾಪುರದಲ್ಲಿ ವ್ಯಕ್ತಿಯ ಮೇಲೆ ಹುಲಿ ದಾಳಿ, ರಾಷ್ಟ್ರಗೀತೆಗೆ ಮಮತಾ ಬ್ಯಾನರ್ಜಿ ಅಗೌರವ ಎಂಬ ಹೇಳಿಕೆಗಳು ಈ ವಾರ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ನಿಜವಲ್ಲ ಎಂದು ಸಾಬೀತು ಪಡಿಸಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ದೆಹಲಿಯಲ್ಲಿ ಕಾರುಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ಲೆಬನಾನ್ ನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದ್ದು, ದೆಹಲಿಯದ್ದಲ್ಲ ಎಂದು ಕಂಡುಕೊಂಡಿದೆ. ಈ ವರದಿ ಇಲ್ಲಿ ಓದಿ

ಬಿಹಾರ ಚುನಾವಣೆ: ಬಿಜೆಪಿ ವಿರುದ್ಧ ಹೋದರೆ ದೆಹಲಿ ಸ್ಫೋಟದಂತಹ ಪರಿಣಾಮದ ಎಚ್ಚರಿಕೆ ನೀಡಿದ ಯೋಗಿ ಆದಿತ್ಯನಾಥ್ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಸತ್ಯಶೋಧನೆ ನಡೆಸಿದಾಗ, ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆನ್ನಲಾದ ವೀಡಿಯೋ ಎಐ ಸೃಷ್ಟಿಯಾಗಿದೆ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ಅತಿಥಿ ಗೃಹದ ಸಿಸಿಟಿವಿ ದೃಶ್ಯಾವಳಿಯಲ್ಲಿ ಹುಲಿಯೊಂದು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸೆರೆಯಾಗಿದೆ ಎಂದು ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ತನಿಖೆ ನಡೆಸಿದಾಗ, ಇದು ನಿಜವಾದ್ದಲ್ಲ ಎಐನಿಂದ ಮಾಡಿದ ವೀಡಿಯೋ ಎಂದು ಗೊತ್ತಾಗಿದೆ. ಈ ವರದಿಯನ್ನು ಇಲ್ಲಿ ಓದಿ

ತಮಿಳುನಾಡು ಕೂನೂರಿನ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಳ್ಳುವ ಮತ್ತು ರೋಗಿಯನ್ನು ಹೊತ್ತೊಯ್ಯುವ ಸ್ಟ್ರೆಚರ್ ರಸ್ತೆಗೆ ಬೀಳುವ ಆಘಾತಕಾರಿ ಘಟನೆ ನಡೆದಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ವೇಳೆ ಇದು ಹಾಸ್ಯದ ಉದ್ದೇಶಕ್ಕೆ ಮಾಡಿದ ಎಐ ವೀಡಿಯೋ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2023ರ ಹಳೆಯ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತನಿಖೆಯಲ್ಲಿ ಬಯಲಾಗಿದೆ. ಈ ವರದಿ ಇಲ್ಲಿ ಓದಿ