Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪೆಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಆಪರೇಷನ್ ಸಿಂದೂರವನ್ನು ಭಾರತ ಆರಂಭಿಸಿದ ಬೆನ್ನಲ್ಲೇ ಹಲವಾರು ಸುಳ್ಳು ಹೇಳಿಕೆಗಳು, ನಕಲಿ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಈವಾರ ಹರಿದಾಡಿವೆ. ಇವುಗಳನ್ನು ನ್ಯೂಸ್ ಚೆಕರ್ ಪರಿಶೀಲಿಸಿದ್ದು ಅವುಗಳ ಸಾಚಾತನವನ್ನು ತೆರೆದಿಟ್ಟಿದೆ. ಇದರೊಂದಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಲ್ಲುಜ್ಜದೆ ನೆನೆಸಿದ ದ್ರಾಕ್ಷಿ ತಿನ್ನುವುದರಿಂದ ರಕ್ತದ ಹರಿವಿಗೆ, ಮೂಳೆಗೆ ಎಂಬ ಹೇಳಿಕೆಯೂ ಇದ್ದು ಇದು ಸುಳ್ಳು ಎಂದು ಸಾಬೀತು ಮಾಡಲಾಗಿದೆ. ಒಟ್ಟಾರೆಯಾಗಿ, ಈ ವಾರ ವೈರಲ್ ಆಗಿರುವ ಸುಳ್ಳು ಹೇಳಿಕೆಗಳ ಕುರಿತ ಒಂದು ನೋಟ ಇಲ್ಲಿದೆ.

ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ ಎಂದು ಹೇಳಿಕೆಯೊಂದನ್ನು ವೀಡಿಯೋ ಜೊತೆಗೆ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ ಎಂದು ಹೇಳಿರುವುದು ನಿಜವಲ್ಲ. ಇದು ರಷ್ಯಾಕ್ಕೆ ಸಂಬಂಧಿಸಿದ ದೃಶ್ಯವಾಗಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಭಾರತದ ಮೇಲೆ ದಾಳಿ ಮಾಡದಂತೆ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ನನ್ನ ಗೆಳೆಯ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ ಎನ್ನಲಾದ ವೀಡಿಯೊ ಆನ್ಲೈನ್ನಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಮೋದಿ ನನ್ನ ಗೆಳೆಯ, ಪಾಕಿಸ್ತಾನಕ್ಕೆ ಎಚ್ಚರಿಕೆ ಎನ್ನುವ ಟ್ರಂಪ್ ವೀಡಿಯೋ ನಕಲಿಯಾಗಿದೆ. ಇದನ್ನು ಎಐ ಮೂಲಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಪಾಕಿಸ್ತಾನ ವಿರೋಧಿ ಪೋಸ್ಟ್ ಹಾಕಿದ್ದಕ್ಕಾಗಿ ಪುಣೆಯಲ್ಲಿ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, ಹಾರ್ನ್ ಹಾಕಿದ್ದಕ್ಕಾಗಿ ನಡೆದ ಗಲಾಟೆಯನ್ನು ಪಾಕಿಸ್ತಾನ ವಿರೋಧಿ ಪೋಸ್ಟ್ ಮಾಡಿದ್ದಕ್ಕಾಗಿ ಹಿಂದೂ ಕುಟುಂಬದ ಮೇಲೆ ದಾಳಿ ಮಾಡಲಾಗಿದೆ ಎಂದು ತಪ್ಪು ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಮೇಲೆ ಭಾರತದ ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲಿಸಿದಾಗ, 2024ರ ಅಕ್ಟೋಬರ್ ಸಂದರ್ಭದಲ್ಲಿ ಇರಾನ್ ಇಸ್ರೇಲ್ ಮೇಲೆ ಮಾಡಿದ ಕ್ಷಿಪಣಿ ದಾಳಿಯದ್ದಾಗಿದೆ ಎಂದು ಬಯಲಾಗಿದೆ. ಈ ವರದಿ ಇಲ್ಲಿ ಓದಿ

ಆಪರೇಷನ್ ಸಿಂದೂರ: ಮಧ್ಯರಾತ್ರಿ ಭಾರತದ ಸೇನೆ ದೀಪಾವಳಿ ಆಚರಣೆ ಮಾಡಿತು ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಕುರಿತು ಶೋಧನೆ ನಡೆಸಿದಾಗ, ವೈರಲ್ ವೀಡಿಯೋ ಭಾರತದ ‘ಆಪರೇಷನ್ ಸಿಂದೂರ ಜೊತೆಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ, ಇದು 2023 ರಲ್ಲಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯ ದೃಶ್ಯವಾಗಿದೆ ಎನ್ನುವುದು ಖಚಿತವಾಗಿದೆ. ಈ ವರದಿ ಇಲ್ಲಿ ಓದಿ

ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆದ ಬೆನ್ನಲ್ಲೇ, ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತದ ದಾಳಿ ಮುಂದುವರಿದಿದೆ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರದಾಡಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, ಸಿಯಾಲ್ ಕೋಟ್ ಮೇಲೆ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಎಂದ ಈ ವೀಡಿಯೋ ಮುಂಬೈನ ಧಾರಾವಿಯದ್ದಾಗಿದೆ. ಸಿಲಿಂಡರ್ ಇದ್ದ ಟ್ರಕ್ ಗೆ ಬೆಂಕಿ ಬಿದ್ದು ಸಂಭವಿಸಿದ ಸ್ಫೋಟದ ವೀಡಿಯೋ ಇದಾಗಿದೆ. ಈ ವರದಿ ಇಲ್ಲಿ ಓದಿ

ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತ ದಾಳಿ ಎಂದು ವೀಡಿಯೋ ಒಂದು ವೈರಲ್ ಆಗುತ್ತಿದೆ. ಆದರೆ ಸತ್ಯಶೋಧನೆ ನಡೆಸಿದಾಗ, ವೈರಲ್ ಆಗುತ್ತಿರುವ ವೀಡಿಯೋ ಫಿಲೆಡೆಲ್ಫಿಯಾದಲ್ಲಿ ಕಳೆದ ಫೆಬ್ರವರಿಯಲ್ಲಿ ವಿಮಾನ ಪತನಗೊಂಡ ಘಟನೆಯದ್ದಾಗಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಆಪರೇಷನ್ ಸಿಂದೂರ ಕಾರ್ಯಾಚರಣೆ ಬಗ್ಗೆ ವಿವರಿಸಿದ ಕರ್ನಲ್ ಸೋಫಿಯಾ ಖುರೇಷಿ ವಿಮಾನ ಚಾಲನೆ ಮಾಡುತ್ತಿರುವುದು ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಇದು ಅಮೆರಿಕದ ಯುದ್ಧವಿಮಾನದ ಪೈಲಟ್ ಕ್ರಿಸ್ಟಿನ್ ಬಿಯೋ ವೂಲ್ಫ್ ಅವರಾಗಿದ್ದಾರೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಭಾರತೀಯ ಸೇನೆ ಪಾಕಿಸ್ತಾನಿ ಪೈಲಟ್ ಅವರನ್ನು ಜೀವಂತವಾಗಿ ಸೆರೆ ಹಿಡಿದಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯ ಪ್ರಕಾರ, ಭಾರತೀಯ ಸೇನೆ ಪಾಕಿಸ್ತಾನಿ ಪೈಲಟ್ ಅವರನ್ನು ಜೀವಂತವಾಗಿ ಸೆರೆ ಹಿಡಿದಿದೆ ಎಂದು ಹಂಚಿಕೊಳ್ಳುತ್ತಿರುವ ಫೋಟೋ ಟರ್ಕಿ ಮೂಲದ್ದಾಗಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಆಪರೇಷನ್ ಸಿಂದೂರದ ಭಾಗವಾಗಿ ಭಾರತ ಸೇನೆ ಪಾಕಿಸ್ತಾನದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯ ಪ್ರಕಾರ, ವೈರಲ್ ವೀಡಿಯೋ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದಾಗಿನದ್ದಾಗಿದ್ದು, ಇದು 2024 ನವೆಂಬರ್ ನಲ್ಲಿ ನಡೆದಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ರಾತ್ರಿ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಗಳನ್ನು ಹಲ್ಲುಜ್ಜದೆ ಬೆಳಗ್ಗೆ ಸೇವಿಸುವುದರಿಂದ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ ಎಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧನೆ ನಡೆಸಿದಾಗ, ಹೇಳಿಕೆ ನಿಜವಲ್ಲ. ಹಾಗೆ ತಿನ್ನುವುದರಿಂದ ಯಾವುದೇ ಮಾಂತ್ರಿಕ ಪರಿಹಾರ ಸಿಗುವುದಿಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025